ಕಾಸರಗೋಡು: ವೈದ್ಯೆ ಕುಳಿತುಕೊಳ್ಳುವ ಕುರ್ಚಿಗೆ ತುರಿಕೆ ಹುಡಿ ಹರಡಿರುವ ಆರೋಪಕ್ಕೆ ಸಂಬಂಧಿಸಿ ಹೊಸದುರ್ಗ ಮಾವುಂಗಾಲ್ಮ ಆಸ್ಪತ್ರೆಯೊಂದರ ಸಿಬ್ಬಂದಿಜಯಕೃಷ್ಣನ್ ಹಾಗೂ ಅಂಜಲಿ ಎಂಬವರ ವಿರುದ್ಧ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪೂರ್ವದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯವೆಸಗಿರುವುದಾಗಿ ಆಸ್ಪತ್ರೆ ವೈದ್ಯೆ ಡಾ. ಟಿ.ಕೆ ಶರ್ಮಿನಾ ಅವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ವೈದ್ಯೆ ಕುಳಿತುಕೊಳ್ಳುವ ಕುರ್ಚಿ ಹಾಗೂ ಮೇಜಿಗೆ ತುರಿಕೆ ಹುಡಿ ಸಿಂಪಡಿಸಲಾಗಿದ್ದು, ಇದನ್ನು ತಿಳಿಯದೆ ಕುರ್ಚಿಯಲ್ಲಿ ಕುಳಿತಿದ್ದ ವೈದ್ಯೆಗೆ ಅಸಹನೀಯ ತುರಿಕೆ ಅನುಭವಕ್ಕೆ ಬಂದಿತ್ತು. ಈ ಬಗ್ಗೆ ತಪಾಸಣೆ ನಡೆಸಿದಾಗ ತುರಿಕೆ ಹುಡಿ ಹರಡಿರುವುದು ಪತ್ತೆಯಾಗಿತ್ತು.

