HEALTH TIPS

ಶಬರಿಮಲೆ ಚಿನ್ನದ ಕಳ್ಳತನ: ದೇವಸ್ವಂ ಮಂಡಳಿಯ ಮಾಜಿ ಸದಸ್ಯ ಎನ್. ವಿಜಯಕುಮಾರ್‍ಗೆ ಜಾಮೀನು

ತಿರುವನಂತಪುರಂ: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ದೇವಸ್ವಂ ಮಂಡಳಿಯ ಮಾಜಿ ಸದಸ್ಯ ಎನ್. ವಿಜಯಕುಮಾರ್‍ಗೆ ಜಾಮೀನು ನೀಡಲಾಗಿದೆ. ಬಂಧನದ 90 ದಿನಗಳನ್ನು ಪೂರ್ಣಗೊಳಿಸಿದ ನಂತರ ಸಹಜ ಜಾಮೀನು ನೀಡಲಾಗಿದೆ. ದೇವಸ್ವಂ ಸದಸ್ಯ ಕೆ.ಪಿ. ಶಂಕರ್‍ದಾಸ್ ಕೂಡ ಏಪ್ರಿಲ್ ಎರಡನೇ ವಾರದಲ್ಲಿ ಸಹಜ ಜಾಮೀನಿಗೆ ಅರ್ಹರಾಗುವರು.  ಪ್ರಸ್ತುತ, ಶಂಕರ್‍ದಾಸ್ ಮಾತ್ರ ನ್ಯಾಯಾಂಗ ಬಂಧನದಲ್ಲಿದ್ದಾರೆ. 


ಎನ್. ವಿಜಯಕುಮಾರ್ ಕರ್ತವ್ಯ ಲೋಪ ಎಸಗಿದ್ದಾರೆ ಮತ್ತು ದೇವಾಲಯದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತನಿಖಾ ತಂಡವು ಪತ್ತೆಮಾಡಿದೆ. ನೌಕರರಲ್ಲಿನ ತಮ್ಮ ಬಲವಾದ ಪ್ರಭಾವವನ್ನು ಬಳಸಿಕೊಂಡು ಸಾಕ್ಷ್ಯ ದಾಖಲೆಗಳನ್ನು ನಾಶಪಡಿಸಿದ್ದಾರೆ ಎಂದು ರಿಮಾಂಡ್ ವರದಿಯಲ್ಲಿ ಹೇಳಲಾಗಿದೆ.

ನೌಕರರನ್ನು ಮನವೊಲಿಸಿ ಅನುಕೂಲಕರ ಹೇಳಿಕೆಗಳನ್ನು ನೀಡುವಂತೆ ಬೆದರಿಕೆ ಹಾಕಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ದೇವಸ್ವಂ ಮಂಡಳಿಯ ಹಸ್ತಕ್ಷೇಪದಿಂದಾಗಿ ಉನ್ನಿಕೃಷ್ಣನ್ ಪೆÇಟ್ಟಿ ಚಿನ್ನದ ಆಭರಣಗಳನ್ನು ಪಡೆದರು ಎಂದು ರಿಮಾಂಡ್ ವರದಿಯಲ್ಲಿ ಹೇಳಲಾಗಿದೆ.

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ, ಪ್ರಕರಣದ ಮೊದಲ ಆರೋಪಿ ಉನ್ನಿಕೃಷ್ಣನ್ ಪೆÇಟ್ಟಿ, ಎನ್ ವಿಜಯಕುಮಾರ್ ಮತ್ತು ಮಾಜಿ ದೇವಸ್ವಂ ಮಂಡಳಿ ಸದಸ್ಯ ಕೆ.ಪಿ. ಶಂಕರದಾಸ್ ವಿರುದ್ಧ ಹೇಳಿಕೆ ನೀಡಿದ್ದರು. ಎಲ್ಲವೂ ಮಂಡಳಿಯ ಅರಿವಿನಿಂದಲೇ ನಡೆದಿದೆ ಎಂಬುದು ಉನ್ನಿಕೃಷ್ಣನ್ ಪೆÇಟ್ಟಿ ಅವರ ಹೇಳಿಕೆಯಾಗಿತ್ತು. ಪದ್ಮಕುಮಾರ್ ಅವರ ಚಿನ್ನದ ಆಭರಣಗಳನ್ನು ಹಸ್ತಾಂತರಿಸುವ ನಿರ್ಧಾರವನ್ನು ಮಂಡಳಿಯು ಅನುಮೋದಿಸಿದೆ ಎಂಬುದಕ್ಕೆ ಪುರಾವೆಗಳು ಸಹ ಕಂಡುಬಂದಿವೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries