ಆಲಪ್ಪುಳ: ಜಿ. ಸುಧಾಕರನ್ ವಿರುದ್ಧ ಡಿವೈಎಫ್ಐ ಗಂಭೀರ ಆರೋಪಗಳನ್ನು ಮಾಡಿದೆ. ಚುನಾವಣಾ ಅಫಿಡವಿಟ್ನಲ್ಲಿ ಆಸ್ತಿ ವಿವರಗಳನ್ನು ತಪ್ಪಾಗಿ ದಾಖಲಿಸಲಾಗಿದೆ ಎಂದು ಆರೋಪಿಸಿ ಡಿವೈಎಫ್ಐ ಆಲಪ್ಪುಳ ಜಿಲ್ಲಾಧ್ಯಕ್ಷ ಸುರೇಶ್ ಕುಮಾರ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ವಿಧಾನಸಭಾ ಚುನಾವಣೆಗೆ ಕೇವಲ ಗಂಟೆಗಳು ಬಾಕಿ ಇರುವಾಗ, ಸಿಪಿಎಂ ಮತ್ತು ಜಿ. ಸುಧಾಕರನ್ ನಡುವಿನ ಆಂತರಿಕ ಯುದ್ಧ ತೀವ್ರಗೊಳ್ಳುತ್ತಿದೆ.
ಚುನಾವಣಾ ನಾಮಪತ್ರಗಳ ಜೊತೆಗೆ ಅಫಿಡವಿಟ್ ಸಲ್ಲಿಸುವ ಮೊದಲು ಸುಧಾಕರನ್ ತಮ್ಮ ಖಾತೆಯಿಂದ ಕುಟುಂಬ ಸದಸ್ಯರ ಖಾತೆಗಳಿಗೆ ದೊಡ್ಡ ಪ್ರಮಾಣದ ಹಣವನ್ನು ವರ್ಗಾಯಿಸಿದ್ದಾರೆ ಎಂಬುದು ದೂರಿನಲ್ಲಿರುವ ಪ್ರಮುಖ ಆರೋಪವಾಗಿದೆ. ಸುಧಾಕರನ್ ಈ ಹಣವನ್ನು ತಮ್ಮ ಮಗಳು, ಸೊಸೆ, ಮಗ ಮತ್ತು ಪತ್ನಿಯ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂದು ಡಿವೈಎಫ್ಐ ಆರೋಪಿಸಿದೆ. ಈ ವಹಿವಾಟುಗಳನ್ನು ಸಾಬೀತುಪಡಿಸುವ ಬ್ಯಾಂಕ್ ದಾಖಲೆಗಳನ್ನು ದೂರಿನೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ.
ಈ ಮಧ್ಯೆ, ಜಿ. ಸುಧಾಕರನ್ ಕಡೆಯಿಂದ ಇತರ ಗಂಭೀರ ದೂರುಗಳು ಬಂದಿವೆ. ಕೆಲವು ಭಯೋತ್ಪಾದಕ ಸಂಘಟನೆಗಳು ಅಂಬಲಪುಳ ಕ್ಷೇತ್ರದಲ್ಲಿ ಚುನಾವಣೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿ ಸುಧಾಕರನ್ ಅವರ ಚುನಾವಣಾ ಏಜೆಂಟ್ ಪೆÇಲೀಸರಿಗೆ ದೂರು ನೀಡಿದ್ದಾರೆ. ಈ ವಿಷಯದಲ್ಲಿ ಕೇಂದ್ರದ ಸಹಾಯವನ್ನು ಕೋರಿ ಈ ದೂರು ಸಲ್ಲಿಸಲಾಗಿದೆ.

