ಇದಕ್ಕೂ ಮುನ್ನ, ರವಿವಾರ ಜನಪ್ರಿಯ ರೇಡಿಯೊ ಕಾರ್ಯಕ್ರಮವಾದ 'ಮನ್ ಕಿ ಬಾತ್'ನಲ್ಲಿ, ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಅಪಾಯಕಾರಿ ಹೇಳಿಕೆಗಳನ್ನು ನೀಡುತ್ತಿದ್ದು, ಇದರಿಂದ ಕೊಲ್ಲಿಯಲ್ಲಿರುವ ಭಾರತೀಯರ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು.
ಇದರ ಬೆನ್ನಿಗೇ, ಪ್ರಿಯಾಂಕಾ ಗಾಂಧಿ ವಾದ್ರಾರಿಂದ ಈ ಹೇಳಿಕೆ ಹೊರ ಬಿದ್ದಿದೆ.
ಕೊಲ್ಲಿಯಲ್ಲಿ ಅಪಾಯದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ತವರಿಗೆ ಮರಳಿ ಕರೆ ತರಲು ಸರಕಾರ ಯಾವ ಯೋಜನೆಯನ್ನು ರೂಪಿಸಿದೆ ಎಂದೂ ಅವರು ಪ್ರಶ್ನಿಸಿದ್ದಾರೆ.
"ಬಾಂಬ್ ಗಳು ಬೀಳುತ್ತಿರುವುದರಿಂದ ಜೀವಗಳು ಅಪಾಯದಲ್ಲಿವೆ. ಈ ಕುರಿತು ಅವರೇನು ಮಾಡುತ್ತಿದ್ದಾರೆ? ಅಪಾಯದಲ್ಲಿ ಸಿಲುಕಿಕೊಂಡಿರುವ ಜನರನ್ನು ಕರೆ ತರಲು ಯೋಜನೆಯೇನು? ಯುದ್ಧದ ಸಂದರ್ಭದಲ್ಲಿ ಇಂತಹ ವಿಷಯಗಳ ಕುರಿತು ರಾಜಕೀಯ ಮಾಡುವುದು ಸೂಕ್ತವಲ್ಲ" ಎಂದು ಅವರು ಚಾಟಿ ಬೀಸಿದ್ದಾರೆ.
"ನಾವು ಈ ನಿಲುವು ಹೊಂದಿದ್ದು, ಇಡೀ ದೇಶ ಒಗ್ಗಟ್ಟಾಗಿದೆ. ಆದರೆ, ಮಧ್ಯೆಪ್ರಾಚ್ಯ ಬಿಕ್ಕಟ್ಟಿನಿಂದ ಉದ್ಭವಿಸಿರುವ ಸಮಸ್ಯೆಗಳಿಗೆ ನಮಗೆ ಪರಿಹಾರ ಬೇಕಿದೆ. ಹೀಗಾಗಿಯೇ ನಾವು ಸಂಸತ್ತಿನಲ್ಲಿ ಈ ಕುರಿತು ಚರ್ಚೆಗೆ ಆಗ್ರಹಿಸುತ್ತಿದ್ದೇವೆ. ಸಂಸತ್ತಿನಲ್ಲಿ ಈ ಕುರಿತು ಚರ್ಚೆ ನಡೆದರೆ, ನಾವೂ ಕೂಡಾ ನಮ್ಮ ಸಲಹೆಗಳನ್ನು ನೀಡಬಹುದು ಹಾಗೂ ಪರಿಹಾರವೊಂದನ್ನು ಕಂಡುಕೊಳ್ಳಬಹುದು" ಎಂದು ಅವರು ಹೇಳಿದ್ದಾರೆ.

