ಕಾಸರಗೋಡು: ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಏ. 26 ರಿಂದ ಮೇ 2 ರ ತನಕ ಜರಗಲಿರುವ ಪುನ: ಪ್ರತಿಷ್ಠಾಬ್ರಹ್ಮಕಲಶೋತ್ಸವದ ಅಂಗವಾಗಿ ಚಪ್ಪರ ಮುಹೂರ್ತ ಶ್ರೀಕ್ಷೇತ್ರ ವಠಾರದಲ್ಲಿ ಜರುಗಿತು.
ಕ್ಷೇತ್ರದ ಧರ್ಮದರ್ಶಿ ನಾರಾಯಣ ಕಾಳ್ಯಂಗಾಡ್ ಮತ್ತು ಅರ್ಚಕ ಯೋಗೀಶ್ ಅವರ ಕಾರ್ಮಿಕತ್ವದಲ್ಲಿ ಮುಹೂರ್ತ ನೆರವೇರಿಸಲಾಯಿತು. ಚಪ್ಪರ ಸಮಿತಿಯ ಲವ ಮೀಪುಗುರಿ, ಸುರೇಶ್ ಅಭಿನಂದನ್ ಅವರು ನೇತೃತ್ವ ವಹಿಸಿದ್ದರು. ಈ ಸಂದರ್ಭ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಕೆ.ಎನ್ ವೆಂಕಟ್ರಮಣ ಹೊಳ್ಳ, ಕ್ಷೇತ್ರ ಮೊಕ್ತೇಸರ ಅಚ್ಚುತ ಕಾಳ್ಯಂಗಾಡು, ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲು, ಉಪಾಧ್ಯಕ್ಷ ಮಿಥುನ್ ಕಾಳ್ಯಂಗಾಡ್, ಕಾರ್ಯದರ್ಶಿ ರಂಜಿತ್ ಮನ್ನಿಪ್ಪಾಡಿ, ಪುಷ್ಪಮ್ಮ ಕಾಳ್ಯಂಗಾಡ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ರಾಜ್ ಕೊರಕೋಡ್, ಮಹಿಳಾ ಸಂಘ ಕಾರ್ಯದರ್ಶಿ ದೀಪಾ ರಾಜೇಶ್, ಪ್ರಶಾಂತ್ ಹಾಗೂ ವಿವಿಧ ಉಪಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.



