ತಿರುವನಂತಪುರಂ: ರಾಜ್ಯದಲ್ಲಿ ಕೆಎಸ್ಆರ್ಟಿಸಿಯಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಇಂದು ಅಧಿಕೃತ ಚಾಲನೆ ನೀಡಲಾಗಿದೆ. ಯೋಜನೆಯನ್ನು ಮುಖ್ಯಮಂತ್ರಿ ವಿ. ಡಿ ಸತೀಶನ್ ಉದ್ಘಾಟಿಸಿದರು.
ಮಹಿಳೆಯರು ಹೆಮ್ಮೆಯಿಂದ ಪ್ರಯಾಣ ಮಾಡಬಹುದೆಂದು ಸಾಮಾಜಿಕ ಆರ್ಥಿಕ ಪ್ರತಿಫಲವನ್ನು ನೀಡುವ ಯೋಜನೆಯಾಗಿದೆ ಪ್ರಿಯದರ್ಶಿನಿ ಎಂದು ಮುಖ್ಯಮಂತ್ರಿ ಹೇಳಿದರು. ಸರ್ಕಾರದ ಅಧಿಕಾರದಲ್ಲಿ ಒಂದು ತಿಂಗಳು ತುಂಬುತ್ತಲೇ ಇಂದಿರಾ ಗ್ಯಾರಂಟಿ ಜಾರಿಯಲ್ಲಿ ಹೆಮ್ಮೆಯಿದೆ ಎಂದು ಹೇಳಿದರು.ಇಂದಿನಿಂದ ಮಹಿಳೆಯರಿಗೂ ಟ್ರಾನ್ಸ್ಜೆಂಡರ್ಸ್ ಮತ್ತು ಕೆಎಸ್ಆರ್ಟಿಸಿ ಆರ್ಡಿನರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಬಹುದು. 3,125 ಬಸ್ಸುಗಳಲ್ಲಿ ‘ಪ್ರಿಯದರ್ಶಿನಿ ಉಚಿತ ಪ್ರಯಾಣ” ಎಂಬ ಸ್ಟಿಕರ್ ಇರುತ್ತದೆ.
ಆರ್ಡಿನರಿ, ಸಿಟಿ ಆರ್ಡಿನರಿ, ಲಿಮಿಟೆಡ್ ಸ್ಟಾಪ್ ಆರ್ಡಿನರಿ, ಟೌನ್ ಟು ಟೌನ್, ಫೆಯರ್ ಸ್ಟೇಜ್ ಆರ್ಡಿನರಿ, ಪಾಯಿಂಟ್ ಟು ಪಾಯಿಂಟ್ ಆರ್ಡಿನರಿ, ಗ್ರಾಮಬಂಡಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಬಹುದು.
ಉಚಿತ ಪ್ರಯಾಣ ಆರ್ಡಿನರಿಯಲ್ಲಿದ್ದರೂ ನಿರ್ಧಾರ ಆರ್ಡಿನರಿಯಲ್ಲ ಎಂದು ಮುಖ್ಯ ಕಾರ್ಯದರ್ಶಿ ಜಯತಿಲಕ್ ಸ್ಪಷ್ಟಪಡಿಸಿದರು. ಕಷ್ಟಪಡುವ ಮಹಿಳೆಯರಿಗೆ ಉಚಿತ ಪ್ರಯಾಣ ದೊಡ್ಡ ಬದಲಾವಣೆ ತರುವುದಾಗಿ ಸಚಿವೆ ಕೆ ಎ ತುಳಸಿ ಅಭಿಪ್ರಾಯಪಟ್ಟರು.

