ಕೊಲ್ಲಂ: ಸಚಿವೆ ಬಿಂದುಕೃಷ್ಣ ಅವರ ತಲೆಯ ಮೇಲೆ ಬಿಸಿ ಪಾಯಸ ಬಿದ್ದು ಅವಾಂತರ ಸೃಷ್ಟಿಯಾದ ಘಟನೆ ವರದಿಯಾಗಿದೆ. ಕೊಲ್ಲಂ ಕೆಎಸ್ಆರ್ಟಿಸಿ ಡಿಪೋದಲ್ಲಿ ನಡೆದ ಪ್ರಿಯದರ್ಶಿನಿ ಬಸ್ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮ ನಡೆಯುವ ವೇಳೆ ಘಟನೆ ಸಂಭವಿಸಿತು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಯೂತ್ ಕಾಂಗ್ರೆಸ್ಸ್ ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ಪಾಯಸ ವಿತರಣೆ ನಡೆಯಿತು. ಇದನ್ನು ಬಸ್ ಒಳಗೆ ವಿತರಿಸಲಾಯಿತು.ಈ ಪಾಯಸ ಪಾತ್ರೆ ಮಂತ್ರಿಯ ತಲೆಯ ಮೇಲೆ ಬಿದ್ದಿದ್ದು, ಬಿಸಿ ಪಾಯಸವಾಗಿತ್ತು. ಸಚಿವೆಯ ಜೊತೆಗಿದ್ದವರು ಶಾಲು ಮುಂತಾದವುಗಳನ್ನು ಬಳಸಿ ಮುಖ, ತಲೆಯನ್ನು ಸ್ವಚ್ಛಗೊಳಿಸಿದರು. ನಂತರ ಚಿನ್ನಕ್ಕಡವ್ ವರೆಗೆ
ಬಸ್ ಪ್ರಯಾಣ ಮಾಡಿ ಸಚಿವರು ತೆರಳಿದರು. ಏನು ಸಂಭವಿಸಿದೆ ಎಂಬುದನ್ನು ಪರಿಶೀಲಿಸಲು ಸೂಚಿಸಲಾಗಿದೆ.

