HEALTH TIPS

ಮಲಪ್ಪುರಂ ಸ್ಫೋಟಕ ಬೇಟೆ: ಕರ್ನಾಟಕ ಕೇಂದ್ರೀಕೃತವಾದ ದೊಡ್ಡ ಪಿತೂರಿ ಜಾಲ ಹಿಂದಿದೆಯೆಂದ ಎನ್.ಐ.ಎ: ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕøತ

ಕೊಚ್ಚಿ: ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡ ಪ್ರಕರಣದ ಹಿಂದೆ ಕರ್ನಾಟಕದಲ್ಲಿ ಕೇಂದ್ರೀಕೃತವಾದ ದೊಡ್ಡ ಕ್ರಿಮಿನಲ್ ಪಿತೂರಿ ಇದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ) ಕೊಚ್ಚಿಯ ವಿಶೇಷ ಎನ್.ಐ.ಎ ನ್ಯಾಯಾಲಯಕ್ಕೆ ತಿಳಿಸಿದೆ. 


ಕರ್ನಾಟಕದ ತಾಳಿಕೋಟೆಯಲ್ಲಿರುವ ಸ್ಫೋಟಕ ವಿತರಣಾ ಕಂಪನಿ 'ಚೇತನ್ ಎಂಟರ್‍ಪ್ರೈಸಸ್' ಮಾಲೀಕ ಮತ್ತು ಪ್ರಕರಣದ ಪ್ರಮುಖ ಯೋಜಕರಾದ ಮಂದ ಗೌಡ ಬಿರಾದಾರ್ (35) ಮತ್ತು ಬಾಪ ಗೌಡ ಭೈರಾಮಯ್ಯ ಚೌಧರಿ (47) ಅವರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕರಿಸಿದೆ.

ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ವಿವರವಾಗಿ ಪ್ರಶ್ನಿಸುವುದು ಅತ್ಯಗತ್ಯ ಎಂದು ವಿಶೇಷ ನ್ಯಾಯಾಧೀಶ ಪಿ.ಕೆ. ಮೋಹನದಾಸ್ ಸ್ಪಷ್ಟಪಡಿಸಿದ್ದಾರೆ.

ಫೆಬ್ರವರಿ 7, 2026 ರಂದು, ಮಲಪ್ಪುರಂನ ತಿರುರಂಗಡಿಯಲ್ಲಿ ಈರುಳ್ಳಿ ಚೀಲಗಳನ್ನು ಸಾಗಿಸುತ್ತಿದ್ದ ಲಾರಿಯಿಂದ ಪೋಲೀಸರು 89,600 ಜೆಲಾಟಿನ್ ಸ್ಟಿಕ್‍ಗಳು ಮತ್ತು 1.05 ಲಕ್ಷ ವಿದ್ಯುತ್ ರಹಿತ ಡಿಟೋನೇಟರ್‍ಗಳನ್ನು ವಶಪಡಿಸಿಕೊಂಡಿದ್ದರು. ಕಳೆದ ಏಪ್ರಿಲ್‍ನಲ್ಲಿ ಹೆಚ್ಚಿನ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಎನ್‍ಐಎ ಪ್ರಕರಣವನ್ನು ವಹಿಸಿಕೊಂಡಿತ್ತು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries