ಕಾಸರಗೋಡು: ಭಾರತೀಯ ಜನತಾ ಪಾರ್ಟಿಯು ರಾಷ್ಟ್ರ ಮಟ್ಟದಲ್ಲಿ ಮೂರು ವರ್ಷಗಳಿಗೊಮ್ಮೆ ಹಮ್ಮಿಕೊಳ್ಳುವ 'ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ'ದ ಅಂಗವಾಗಿ ಮಂಡಲ ಮತ್ತು ಪಂಚಾಯಿತಿ ಸಮಿತಿಗಳ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಕಾರ್ಯಕರ್ತರಿಗಾಗಿ ಎರಡು ದಿನಗಳ ಮಂಡಲ ತರಬೇತಿ ಶಿಬಿರವನ್ನು ಜುಲೈ 11 ಮತ್ತು 12 ರಂದು ವಿವಿಧ ಕೇಂದ್ರಗಳಲ್ಲಿ ಆಯೋಜಿಸಲಾಗಿದೆ.
ಕಾಸರಗೋಡು ಸಂಘಟನಾ ಮಂಡಲದ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಜುಲೈ 11 ರಂದು ಸಂಜೆ 6 ಗಂಟೆಗೆ ಪುಳ್ಕೂರು ಶ್ರೀ ಮಹಾದೇವ ಸಭಾ ಭವನ ಸಭಾಂಗಣದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ಅವರು ತರಬೇತಿ ಶಿಬಿರ ಉದ್ಘಾಟಿಸುವರು.
ಉದುಮ ಸಂಘಟನಾ ಮಂಡಲದ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಜುಲೈ 11 ರಂದು ಸಂಜೆ 6ಕ್ಕೆ ಪೆರಿಯಾ ಸುರಭಿ ಸಭಾಂಗಣದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯ ಸೆಲ್ ಸಂಯೋಜಕ ವಿ .ಕೆ. ಸಜೀವನ್ ತರಬೇತಿ ಉದ್ಘಾಟಿಸಲಿರುವುದಾಗಿ ಪ್ರಕಟಣೆ ತಿಳಿಸಿದೆ.

