ನೇಪಾಳ-ಟಿಬೆಟ್ ಗಡಿಯಲ್ಲಿ ಬುಧವಾರ ಸಂಭವಿಸಿದ ಭೀಕರ ಪ್ರವಾಹಕ್ಕೆ ಹಿಮಬಂಡೆಗಳ ಕುಸಿತವೇ ಪ್ರಮುಖ ಕಾರಣವಾಗಿರಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಆದರೆ ಈ ದುರಂತದ ಹಿಂದೆ ಹವಾಮಾನ ಬದಲಾವಣೆಯ ಪಾತ್ರ ಎಷ್ಟಿದೆ ಎಂಬುದು ಕೂಡ ದೊಡ್ಡ ಪ್ರಶ್ನೆಯಾಗಿದೆ. ಒಂದು ವಿಚಾರವಂತೂ ಸ್ಪಷ್ಟ; ಹಿಮಾಲಯದ ತಾಪಮಾನ ಏರಿಕೆಯಾಗುತ್ತಿದ್ದು, ಹಿಮ, ಬಂಡೆ ಹಾಗೂ ಪರ್ವತ ಇಳಿಜಾರುಗಳ ಸ್ಥಿರತೆಯ ಮೇಲೂ ಪರಿಣಾಮ ಬೀರುತ್ತಿದೆ.
ನೇಪಾಳದ ಲಾಂಗ್ಟಾಂಗ್ ಲಿರುಂಗ್ ಪರ್ವತದ ಉತ್ತರ ಇಳಿಜಾರಿನಲ್ಲಿ ಸುಮಾರು 5,200 ಮೀಟರ್ ಎತ್ತರದಲ್ಲಿ ಹಿಮನದಿಯ ಒಂದು ದೊಡ್ಡ ಭಾಗ ಕುಸಿದಿದೆ ಎಂದು ಉಪಗ್ರಹ ಚಿತ್ರಗಳ ಪ್ರಾಥಮಿಕ ವಿಶ್ಲೇಷಣೆಯಿಂದ ಗೊತ್ತಾಗಿದೆ. ಹಿಮ ಮತ್ತು ಬಂಡೆಗಳು ಕುಸಿದು ಕಣಿವೆಗೆ ಅಪ್ಪಳಿಸಿದ ಪರಿಣಾಮ, ನೀರು, ಕೆಸರು ಮತ್ತು ಬಂಡೆಗಳ ಪ್ರವಾಹ ಉಂಟಾಗಿ, ನದಿಯ ಹರಿವನ್ನೇ ಗಾಳುಮೇಳು ಮಾಡಿದೆ. ಕೆಲವೇ ನಿಮಿಷಗಳಲ್ಲಿ ಭಾರಿ ಪ್ರಮಾಣದ ನೀರು ಮತ್ತು ಕೆಸರು ಕೆಳಭಾಗದ ಜನವಸತಿ ಪ್ರದೇಶಗಳತ್ತ ಹರಿದು, ಮನೆಗಳು, ಸೇತುವೆಗಳು, ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ನುಂಗಿ ಹಾಕಿದೆ.
ಕುಸಿತದ ರಭಸಕ್ಕೆ ಭೂಕಂಪ ಸಂಭವಿಸಿದ ಅನುಭವವಾಗಿದೆ. ಈ ಘಟನೆಯಿಂದ ಉಂಟಾದ ಕಂಪನವು 5.2 ತೀವ್ರತೆಯ ಭೂಕಂಪಕ್ಕೆ ಸಮಾನವಾಗಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ಹೇಳಿದೆ. ಆರಂಭದಲ್ಲಿ ಪ್ರದೇಶದಲ್ಲಿ ಸಂಭವಿಸಿದ ಭೂಕಂಪವೇ ಹಿಮನದಿ ಕುಸಿತಕ್ಕೆ ಕಾರಣವಾಗಿರಬಹುದು ಎಂಬ ಅನುಮಾನವಿತ್ತು. ಆದರೆ ನಂತರದ ವಿಶ್ಲೇಷಣೆಗಳು ಹಿಮಬಂಡೆ ಕುಸಿತದಿಂದ ಉಂಟಾಗಿರಬಹುದು ಎಂದು ಸೂಚಿಸಿವೆ.
ಹವಾಮಾನ ಬದಲಾವಣೆಯ ಪಾತ್ರವಿದೆಯೇ?
ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ವರ್ಷಪೂರ್ತಿ ಹೆಪ್ಪುಗಟ್ಟಿರುವ ಮಣ್ಣು, ಬಂಡೆ ಮತ್ತು ಇತರ ವಸ್ತುಗಳ ಪದರವನ್ನು 'ಪರ್ಮಾಫ್ರಾಸ್ಟ್' ಎಂದು ಕರೆಯಲಾಗುತ್ತದೆ. ಇದು ಸಾವಿರಾರು ವರ್ಷಗಳಿಂದ ಪರ್ವತದ ಇಳಿಜಾರುಗಳನ್ನು ಒಂದು ರೀತಿಯಲ್ಲಿ ಗಟ್ಟಿಯಾಗಿ ಹಿಡಿದಿಟ್ಟಿರುವ ನೈಸರ್ಗಿಕ ತಡೆಗೋಡೆಯಂತೆ ಕೆಲಸ ಮಾಡುತ್ತದೆ.
ತಾಪಮಾನ ಏರಿದಂತೆ ಈ ಹೆಪ್ಪುಗಟ್ಟಿದ ನೆಲ ಕರಗಲು ಆರಂಭಿಸುತ್ತದೆ. ಪರಿಣಾಮ, ಹಿಂದೆ ಗಟ್ಟಿಯಾಗಿದ್ದ ಪರ್ವತದ ಭಾಗಗಳು ಹೆಚ್ಚು ಅಸ್ಥಿರವಾಗುತ್ತದೆ. ಹಿಮನದಿಗಳ ವ್ಯಾಪ್ತಿ ಕಡಿಮೆಯಾಗುವುದು, ಹಿಮ ಕರಗುವಿಕೆ ಹೆಚ್ಚಳವಾಗುವುದು ಮತ್ತು ಪರ್ಮಾಫ್ರಾಸ್ಟ್ ದುರ್ಬಲಗೊಳ್ಳುವುದರಿಂದ ಪರ್ವತ ಪ್ರದೇಶಗಳಲ್ಲಿ ಭೂಕುಸಿತ, ಹಿಮಪಾತ ಮತ್ತು ಹಿಮ ಬಂಡೆ ಕುಸಿತದ ಅಪಾಯವನ್ನು ಉಂಟಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಹಿಮನದಿಗಳು ಮತ್ತು ಪರ್ಮಾಫ್ರಾಸ್ಟ್ ಕರಗುತ್ತಿರುವುದು ಈ ಪ್ರದೇಶದ ಸ್ಥಿರತೆಯನ್ನು ದುರ್ಬಲಗೊಳಿಸಿರಬಹುದು ಎಂದು ಭೂವಿಜ್ಞಾನಿಗಳು ಅಂದಾಜಿಸಿದ್ದಾರೆ. ಆದರೆ ಈ ಹಿಮ ಬಂಡೆ ಕುಸಿತಕ್ಕೆ ಹವಾಮಾನ ಬದಲಾವಣೆಯೇ ನೇರ ಕಾರಣ ಎಂದು ಈಗಲೇ ಹೇಳುವುದು ಅಕಾಲಿಕ.
ಅಂದರೆ, ಹವಾಮಾನ ಬದಲಾವಣೆಯೊಂದೇ ಈ ದುರಂತಕ್ಕೆ ಕಾರಣ ಎನ್ನುವುದಕ್ಕಿಂತ, ಇಂತಹ ಘಟನೆಗಳು ಸಂಭವಿಸಲು ಕಾರಣವಾಗುವ ಪರಿಸ್ಥಿತಿಗಳನ್ನು ಅದು ಹೆಚ್ಚಿಸುತ್ತಿದೆಯೇ ಎಂಬುದೇ ವಿಜ್ಞಾನಿಗಳ ಪ್ರಮುಖ ಜಿಜ್ಞಾಸೆ.
ನೇಪಾಳದ ಪರ್ವತಗಳಲ್ಲಿ ಸ್ಫೋಟಗೊಂಡ ಪ್ರವಾಹಕ್ಕೆ ಬಿಸಿಯಾಗುತ್ತಿರುವ ಹಿಮಾಲಯ ಕಾರಣವೇ?
ಒಂದು ಸಾಲಿನಲ್ಲಿನೇಪಾಳದ ಹಿಮಾಲಯದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಹಿಮಬಂಡೆಗಳ ಕುಸಿತ ಪ್ರಮುಖ ಕಾರಣವಾಗಿದ್ದು, ಹವಾಮಾನ ಬದಲಾವಣೆಯು ಪರ್ವತಗಳ ಸ್ಥಿರತೆಯನ್ನು ದುರ್ಬಲಗೊಳಿಸುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.
ಪ್ರಮುಖ ಪ್ರಶ್ನೋತ್ತರ
ನೇಪಾಳದಲ್ಲಿ ಸಂಭವಿಸಿದ ಈ ದುರಂತಕ್ಕೆ ನಿಜವಾದ ಕಾರಣವೇನು?
ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಸುಮಾರು 5,200 ಮೀಟರ್ ಎತ್ತರದಲ್ಲಿ ಹಿಮನದಿಯ ಒಂದು ಭಾಗ ಕುಸಿದು, ನದಿಯ ಹರಿವನ್ನು ತಡೆದು ಬಳಿಕ ಏಕಾಏಕಿ ಪ್ರವಾಹಕ್ಕೆ ಕಾರಣವಾಯಿತು.
ಪರ್ಮಾಫ್ರಾಸ್ಟ್ ಕರಗುವಿಕೆಯು ಹಿಮಾಲಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಎತ್ತರದ ಪ್ರದೇಶಗಳಲ್ಲಿ ಪರ್ವತಗಳನ್ನು ಗಟ್ಟಿಯಾಗಿ ಹಿಡಿದಿಟ್ಟಿರುವ ಹೆಪ್ಪುಗಟ್ಟಿದ ಮಣ್ಣು ಅಥವಾ ಪರ್ಮಾಫ್ರಾಸ್ಟ್, ತಾಪಮಾನ ಏರಿಕೆಯಿಂದ ಕರಗುತ್ತಿದ್ದು, ಇದು ಪರ್ವತಗಳನ್ನು ಅಸ್ಥಿರಗೊಳಿಸುತ್ತಿದೆ.
ಈ ಘಟನೆಗೂ ಹವಾಮಾನ ಬದಲಾವಣೆಗೂ ಇರುವ ಸಂಬಂಧವೇನು?
ಹವಾಮಾನ ಬದಲಾವಣೆಯೇ ನೇರ ಕಾರಣ ಎಂದು ಹೇಳಲು ಈಗಲೇ ಸಾಧ್ಯವಿಲ್ಲದಿದ್ದರೂ, ತಾಪಮಾನ ಏರಿಕೆಯು ಭೂಕುಸಿತ ಮತ್ತು ಹಿಮಪಾತದಂತಹ ಅಪಾಯಕಾರಿ ಸ್ಥಿತಿಗಳನ್ನು ಹೆಚ್ಚಿಸುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ಬಲಪಡಿಸಲು ಏಕೆ ಅಗತ್ಯವಿದೆ?
ಸಾಂಪ್ರದಾಯಿಕ ಮಳೆ ಆಧಾರಿತ ಎಚ್ಚರಿಕೆ ವ್ಯವಸ್ಥೆಗಳು ಇಂತಹ ಹಠಾತ್ ಹಿಮ ಬಂಡೆ ಕುಸಿತಗಳನ್ನು ಪತ್ತೆಹಚ್ಚಲು ವಿಫಲವಾಗುತ್ತಿದ್ದು, ಅತ್ಯಾಧುನಿಕ ಉಪಗ್ರಹ ಮತ್ತು ಸೆನ್ಸಾರ್ ನಿಗಾ ಅವಶ್ಯಕವಾಗಿದೆ.
ಈ ಘಟನೆಯಿಂದಾಗಿ ಉಂಟಾದ ತೀವ್ರತೆಯ ಮಟ್ಟ ಎಷ್ಟು?
ಈ ಹಿಮ ಬಂಡೆ ಕುಸಿತದಿಂದ ಉಂಟಾದ ಕಂಪನವು 5.2 ತೀವ್ರತೆಯ ಭೂಕಂಪಕ್ಕೆ ಸಮಾನವಾಗಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ವರದಿ ಮಾಡಿದೆ.
ಪ್ರಮುಖ ಅಂಕಿಅಂಶಗಳು
5,200 ಮೀಟರ್ಹಿಮ ಕುಸಿತ ಸಂಭವಿಸಿದ ಎತ್ತರ5.2ಭೂಕಂಪದ ತೀವ್ರತೆಯೊಂದಿಗೆ ಹೋಲಿಕೆ9 ಮೀಟರ್ನದಿಯ ನೀರಿನ ಮಟ್ಟ ಏರಿಕೆ359ದೃಢಪಟ್ಟ ಮರಣ ಸಂಖ್ಯೆ1,000 ಕ್ಕಿಂತ ಹೆಚ್ಚುನಾಪತ್ತೆಯಾದವರ ಸಂಖ್ಯೆ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ನೇಪಾಳ ದುರಂತಕ್ಕೆ ಕಾರಣವಾಯಿತೇ ಹಿಮನದಿಗಳ ಕರಗುವಿಕೆ: ವಿಜ್ಞಾನಿಗಳು ಹೇಳುವುದೇನು?
ಪರ್ವತದೊಳಗೆ ನಡೆಯುತ್ತಿರುವ ಬದಲಾವಣೆ
ಹಿಮಾಲಯವನ್ನು ನಾವು ಸಾಮಾನ್ಯವಾಗಿ ಹಿಮದಿಂದ ಆವೃತವಾದ ಬೃಹತ್ ಪರ್ವತಶ್ರೇಣಿಯಾಗಿ ನೋಡುತ್ತೇವೆ. ಆದರೆ ಅದರ ಎತ್ತರದ ಪ್ರದೇಶಗಳಲ್ಲಿ ಹಿಮ, ಬಂಡೆ ಮತ್ತು ಮಣ್ಣು ಪರಸ್ಪರ ಬೆಸೆದುಕೊಂಡಿರುವ ಸೂಕ್ಷ್ಮ ಸಮತೋಲನವಿದೆ.
ಪರ್ಮಾಫ್ರಾಸ್ಟ್ ಕರಗಿದಂತೆ, ಗಟ್ಟಿಯಾಗಿದ್ದ ನೆಲ ಸಡಿಲಗೊಂಡು ಬಿರುಕುಗಳು ಮೂಡಬಹುದು. ಮಳೆ ಮತ್ತು ಕರಗಿದ ಹಿಮದ ನೀರು ಈ ಬಿರುಕುಗಳೊಳಗೆ ನುಗ್ಗಿದಾಗ ಪರ್ವತದ ಇಳಿಜಾರು ಮತ್ತಷ್ಟು ದುರ್ಬಲವಾಗುತ್ತದೆ. ಹೀಗಾಗಿ ಒಂದು ನೀರ್ಗಲ್ಲು ಕುಸಿತವು ಕೇವಲ ಹಿಮ ಕುಸಿತವಾಗಿರದೆ, ಅದರೊಂದಿಗೆ ಬಂಡೆಗಳು, ಮಣ್ಣು ಮತ್ತು ಅಪಾರ ಪ್ರಮಾಣದ ನೀರೂ ಸೇರಿಕೊಂಡು ಕೆಳಭಾಗದಲ್ಲಿ ಭೀಕರ ಪ್ರವಾಹವನ್ನು ಸೃಷ್ಟಿಸುತ್ತದೆ. ನೇಪಾಳದ ಈ ಘಟನೆ ಕೂಡ ಇದೇ ರೀತಿಯಾಗಿ ಸಂಭವಿಸಿದ್ದರಬಹುದು.
ಪರ್ವತದಿಂದ ಕುಸಿದ ಹಿಮ-ಬಂಡೆಗಳ ರಾಶಿ ನದಿಯ ಹರಿವನ್ನು ತಡೆಯಿತು. ತಡೆ ಒಡೆದ ಕ್ಷಣಕ್ಕೆ ನೀರು, ಕೆಸರು ಮತ್ತು ಬಂಡೆಗಳ ಭಾರಿ ಪ್ರವಾಹ ಕಣಿವೆಯತ್ತ ನುಗ್ಗಿತು. ಟ್ರಿಶುಲಿ ನದಿಯಲ್ಲಿ ನೀರಿನ ಮಟ್ಟ ಕೇವಲ ಅರ್ಧ ಗಂಟೆಯಲ್ಲಿ ಸುಮಾರು 9 ಮೀಟರ್ವರೆಗೆ ಏರಿತ್ತು ಎಂದು ವರದಿಯಾಗಿದೆ.
ನೇಪಾಳ ಪ್ರವಾಹ: 359 ಸಾವು: ಒಂದು ಸಾವಿರಕ್ಕೂ ಅಧಿಕ ಮಂದಿ ನಾಪತ್ತೆ
ಇದು ಹಿಮ ನದಿ ಸ್ಫೋಟವೇ?
ಆರಂಭದಲ್ಲಿ ಹಲವರು ಇದನ್ನು 'ಗ್ಲೇಷಿಯಲ್ ಲೇಕ್ ಔಟ್ಬರ್ಸ್ಟ್ ಫ್ಲಡ್' (ಜಿಎಲ್ಒಫ್) ಎಂದು ಭಾವಿಸಿದ್ದರು. ಹಿಮನದಿಗಳು ಕರಗಿದಾಗ ಪರ್ವತಗಳಲ್ಲಿ ದೊಡ್ಡ ಸರೋವರಗಳು ರೂಪುಗೊಳ್ಳುತ್ತವೆ. ಅವುಗಳ ನೈಸರ್ಗಿಕ ಅಣೆಕಟ್ಟು ಒಡೆದರೆ ಅಪಾರ ಪ್ರಮಾಣದ ನೀರು ಏಕಾಏಕಿ ಕೆಳಕ್ಕೆ ಹರಿದು ಪ್ರವಾಹ ಉಂಟಾಗುತ್ತದೆ. ಇದನ್ನೇ ಜಿಎಲ್ಒಫ್ ಎಂದು ಕರೆಯಲಾಗುತ್ತದೆ. ಹಿಮಾಲಯದಲ್ಲಿ ಇಂತಹ ಸರೋವರಗಳ ಸಂಖ್ಯೆ ಹೆಚ್ಚುತ್ತಿದ್ದು, ಹವಾಮಾನ ಬದಲಾವಣೆಯ ತಂದ ಅಪಾಯಗಳಲ್ಲಿ ಒಂದು. ಈಗ ನೇಪಾಳದಲ್ಲಿ ನಡೆದಿರುವ ಘಟನೆ ಸಮಾನ್ಯದ್ದಲ್ಲ.
ಪ್ರಾರಂಭದಲ್ಲಿ ಮಾಡಲಾದ ಉಪಗ್ರಹ ವಿಶ್ಲೇಷಣೆಗಳ ಪ್ರಕಾರ, ಈ ಘಟನೆಯು ದೊಡ್ಡ ಹಿಮ ಬಂಡೆ ಕುಸಿತದಿಂದ ಆರಂಭವಾಗಿರುವ ಸಾಧ್ಯತೆ ಇದೆ. ನಂತರ ಕುಸಿದ ಅವಶೇಷಗಳು ನದಿಯ ಹರಿವನ್ನು ತಡೆದು ತಾತ್ಕಾಲಿಕವಾಗಿ ನೀರು ಸಂಗ್ರಹವಾಗುವಂತೆ ಮಾಡಿರಬಹುದು. ಆ ತಡೆ ಒಡೆದಾಗ ಕೆಳಭಾಗಕ್ಕೆ ಭಾರಿ ಪ್ರವಾಹ ದೌಡಾಯಿಸಿರಬಹುದು. ಘಟನೆ ಹೇಗೆ ಹಂತ ಹಂತವಾಗಿ ಸಂಭವಿಸಿತು ಎಂಬುದರ ಕುರಿತು ವಿಜ್ಞಾನಿಗಳು ಇನ್ನೂ ಹೆಚ್ಚಿನ ಉಪಗ್ರಹ ಮತ್ತು ಭೌಗೋಳಿಕ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ.
ಪ್ರವಾಹದಲ್ಲಿ ಹೆಚ್ಚು ಹಾನಿಯಾದ ನೇಪಾಳ-ಟಿಬೆಟ್ ಗಡಿ: ಈ ಋತುವಿನಲ್ಲಿ ಜನಸಂದಣಿ ಏಕೆ?
ಎಚ್ಚರಿಕೆ ವ್ಯವಸ್ಥೆಗಳಿಗೂ ದೊಡ್ಡ ಸವಾಲು
ಇಂತಹ ದುರಂತಗಳ ಮತ್ತೊಂದು ಸವಾಲೆಂದರೆ, ಮುನ್ನೆಚ್ಚರಿಕೆ ನೀಡಲು ಸಿಗುವ ಸಮಯ ತೀರಾ ಕಡಿಮೆ. ಮಳೆಯ ಆಧಾರದ ಮೇಲೆ ಪ್ರವಾಹವನ್ನು ಮುಂಚಿತವಾಗಿ ಅಂದಾಜಿಸುವ ಸಾಂಪ್ರದಾಯಿಕ ವ್ಯವಸ್ಥೆಗಳು ಇಂತಹ ಹಿಮ ಬಂಡೆ ಕುಸಿತ ಅಥವಾ ಅತಿ ವೇಗದ ಕೆಸರು-ನೀರಿನ ಪ್ರವಾಹವನ್ನು ಪತ್ತೆಹಚ್ಚಲು ಸಾಕಾಗುವುದಿಲ್ಲ. ಏಕೆಂದರೆ ಇಲ್ಲಿ ಅಪಾಯದ ಮೂಲ ಮಳೆಯೇ ಆಗಿರಬೇಕೆಂದಿಲ್ಲ.
ನೇಪಾಳದ ಈ ಘಟನೆ ಭಾರಿ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲೇ ಪ್ರವಾಹ ಸಂಭವಿಸಿರಲಿಲ್ಲ. ಪರ್ವತದ ಮೇಲ್ಭಾಗದಲ್ಲಿ ನಡೆದ ಕುಸಿತದಿಂದ ಕೆಲವೇ ಕ್ಷಣದಲ್ಲಿ ಕೆಳಭಾಗಕ್ಕೆ ಅಪಾರ ಪ್ರಮಾಣದ ನೀರು ಮತ್ತು ಅವಶೇಷಗಳು ಬಂದವು. ಹೀಗಾಗಿ ಸಾಂಪ್ರದಾಯಿಕ ನದಿ ನೀರಿನ ಮಟ್ಟದ ಎಚ್ಚರಿಕೆ ವ್ಯವಸ್ಥೆಗೆ ಪ್ರತಿಕ್ರಿಯಿಸಲು ಬೇಕಾದಷ್ಟು ಸಮಯವೇ ಸಿಗದಿರುವ ಸಾಧ್ಯತೆ ಇದೆ.
ಉಪಗ್ರಹ ನಿಗಾ, ಭೂಕಂಪನ ಮತ್ತು ಭೂಚಲನೆ ಪತ್ತೆಹಚ್ಚುವ ಸೆನ್ಸರ್ಗಳು, ಹಿಮನದಿಗಳ ನಿರಂತರ ಮೇಲ್ವಿಚಾರಣೆ ಹಾಗೂ ಸ್ಥಳೀಯರಿಗೆ ತ್ವರಿತ ಎಚ್ಚರಿಕೆ-ಇವೆಲ್ಲವನ್ನೂ ಒಳಗೊಂಡ ಸಮಗ್ರ ಮುನ್ನೆಚ್ಚರಿಕೆ ವ್ಯವಸ್ಥೆ ಅಗತ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ತೋರಿಸಿದೆ.
ನೇಪಾಳ ಪ್ರವಾಹಕ್ಕೆ ಭೂಕಂಪ ಕಾರಣ: ಇಸ್ರೊ ಹೇಳಿದ್ದೇನು?
ಇನ್ನೂ ಉತ್ತರ ಸಿಗದ ಪ್ರಶ್ನೆ
ಈ ದುರಂತದ ತಕ್ಷಣದ ಕಾರಣದ ಬಗ್ಗೆ ವಿಜ್ಞಾನಿಗಳ ಚಿತ್ರಣ ಈಗ ಹೆಚ್ಚು ಸ್ಪಷ್ಟವಾಗುತ್ತಿದೆ-ಹಿಮನದಿಯ ಒಂದು ಭಾಗ ಕುಸಿದು, ಹಿಮ-ಬಂಡೆಗಳ ರಾಶಿ ನದಿಯ ಹರಿವನ್ನು ತಡೆದು, ಬಳಿಕ ಏಕಾಏಕಿ ಪ್ರವಾಹ ಉಂಟಾದ ಸಾಧ್ಯತೆ ಹೆಚ್ಚು.
ಈ ಘಟನೆಗೆ ಕಾರಣವೇನು? ಅದಕ್ಕೆ ತಾಪಮಾನ ಏರಿಕೆ ಎಷ್ಟು ಕಾರಣ? ಪರ್ಮಾಫ್ರಾಸ್ಟ್ ಕರಗುವಿಕೆ ಎಷ್ಟು ಪಾತ್ರ ವಹಿಸಿದೆ? ಹಿಮ ಕರಗುವಿಕೆ, ಮಳೆ, ಪರ್ವತದ ಭೌಗೋಳಿಕ ರಚನೆ ಅಥವಾ ಇತರ ಅಲ್ಪಾವಧಿಯ ಅಂಶಗಳು ಎಷ್ಟು ಪ್ರಭಾವ ಬೀರಿವೆ? ಈ ಪ್ರಶ್ನೆಗಳಿಗೆ ಉತ್ತರಿಸಲು ವಿಜ್ಞಾನಿಗಳು ಇನ್ನಷ್ಟು ಉಪಗ್ರಹ ಚಿತ್ರಗಳು, ಹವಾಮಾನ ದಾಖಲೆಗಳು, ಭೂವೈಜ್ಞಾನಿಕ ಮಾಹಿತಿ ಮತ್ತು ಸ್ಥಳೀಯ ಮಾಹಿತಿಯನ್ನು ಪರಿಶೀಲಿಸಬೇಕಿದೆ.
ಆದ್ದರಿಂದ ನೇಪಾಳದ ಈ ದುರಂತವನ್ನು 'ಹವಾಮಾನ ಬದಲಾವಣೆಯಿಂದ ಸಂಭವಿಸಿದ ಪ್ರವಾಹ' ಎಂದು ಸರಳವಾಗಿ ಕರೆಯುವುದು ಈಗಲೇ ಸರಿಯಾಗುವುದಿಲ್ಲ.
ಮತ್ತೊಂದು ಎಚ್ಚರಿಕೆ
ಹಿಮಾಲಯದ ತಾಪಮಾನ ಏರಿಕೆಯಾಗುತ್ತಿದೆ. ಹಿಮನದಿಗಳ ವ್ಯಾಪ್ತಿ ಕುಗ್ಗುತ್ತಿದೆ. ಪರ್ಮಾಫ್ರಾಸ್ಟ್ ದುರ್ಬಲವಾಗುತ್ತಿದೆ. ಈ ಬದಲಾವಣೆಗಳು ಪರ್ವತ ಪ್ರದೇಶಗಳ ಸ್ಥಿರತೆಯ ಮೇಲೂ ಪರಿಣಾಮ ಬೀರುತ್ತಿವೆ.
ನೇಪಾಳದ ಈ ದುರಂತಕ್ಕೆ ಹವಾಮಾನ ಬದಲಾವಣೆಯೇ ನೇರ ಕಾರಣ ಎಂದು ಹೇಳಲು ಇನ್ನೂ ಸಾಕಷ್ಟು ಪುರಾವೆಗಳಿಲ್ಲ. ಆದರೆ ಹಿಮಾಲಯದ ತಾಪಮಾನ ಏರಿಕೆ ಇಂತಹ ಅಪಾಯಕಾರಿ ಘಟನೆಗಳಿಗೆ ಪರ್ವತಗಳನ್ನು ಹೆಚ್ಚು ದುರ್ಬಲಗೊಳಿಸುತ್ತಿದೆಯೇ ಎಂಬುದು ವಿಜ್ಞಾನಿಗಳ ಮುಂದಿರುವ ಗಂಭೀರ ಪ್ರಶ್ನೆಯಾಗಿದೆ.
ಆಧಾರ: ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ, ದಿ ನ್ಯೂಯಾರ್ಕ್ ಟೈಮ್ಸ್, ರಾಯಿಟರ್ಸ್, ದಿ ಗಾರ್ಡಿಯನ್ ಹಾಗೂ ಅಸೋಸಿಯೇಟೆಡ್ ಪ್ರೆಸ್

