ಕೊಚ್ಚಿ: ಕೊಚ್ಚಿ ಮೆಟ್ರೋ ರೈಲು ಲಿಮಿಟೆಡ್ (ಕೆಎಂಆಎರ್.ಎಲ್) ಹೆಸರನ್ನು 'ಕೇರಳ ಮೆಟ್ರೋ ರೈಲು ಲಿಮಿಟೆಡ್' ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
ಈ ನಿಟ್ಟಿನಲ್ಲಿ, ಕೆಎಂಆಎರ್.ಎಲ್ ವ್ಯವಸ್ಥಾಪಕ ನಿರ್ದೇಶಕ ಲೋಕನಾಥ್ ಬೆಹ್ರಾ ಅವರು ರಾಜ್ಯ ಸರ್ಕಾರದಿಂದ ತಾತ್ವಿಕ ಅನುಮೋದನೆ ಕೋರಿ ಸರ್ಕಾರಕ್ಕೆ ಶಿಫಾರಸನ್ನು ಸಲ್ಲಿಸಿದ್ದಾರೆ.
ಈ ಪ್ರಮುಖ ಕ್ರಮವು ಕೊಚ್ಚಿ ನಗರದಲ್ಲಿ ಮೆಟ್ರೋ ಸೇವೆಗಳ ಜೊತೆಗೆ ರಾಜ್ಯಾದ್ಯಂತ ನಗರ ಸಾರಿಗೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಯೋಜಿಸುವುದು ಮತ್ತು ಕಾರ್ಯಗತಗೊಳಿಸುವ ಗುರಿಯನ್ನು ಹೊಂದಿದೆ.
ಅಲುವಾದಿಂದ ತ್ರಿಪುನಿತುರವರೆಗಿನ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಕೊಚ್ಚಿ ಮೆಟ್ರೋ ಪ್ರಸ್ತುತ ಕಾರ್ಯಾಚರಣೆಯ ಲಾಭವನ್ನು ಗಳಿಸುತ್ತಿದೆ. ಕಲೂರ್ ಎಐಓ ಕ್ರೀಡಾಂಗಣದಿಂದ ಕಾಕನಾಡ್ ಸ್ಮಾರ್ಟ್ ಸಿಟಿವರೆಗಿನ ಎರಡನೇ ಹಂತದ ನಿರ್ಮಾಣ ಕಾರ್ಯವು ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ.
ಇದರ ಜೊತೆಗೆ, ಏಒಖಐ ಕೊಚ್ಚಿ ವಾಟರ್ ಮೆಟ್ರೋ ಮತ್ತು ಎಲೆಕ್ಟ್ರಿಕ್ ಮೊಬಿಲಿಟಿ ಯೋಜನೆಗಳನ್ನು ಸಹ ಯಶಸ್ವಿಯಾಗಿ ಕಾರ್ಯಗತಗೊಳಿಸುತ್ತಿದೆ. ತಿರುವನಂತಪುರಂ ಮತ್ತು ಕೋಝಿಕ್ಕೋಡ್ ನಗರಗಳಲ್ಲಿನ ಮೆಟ್ರೋ ಯೋಜನೆಗಳ ನಿರ್ಮಾಣ ಮತ್ತು ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಸರ್ಕಾರ ಕೆಎಂಆರ್ಎಲ್ಗೆ ನೀಡಿದೆ.
ಈ ಸಂದರ್ಭದಲ್ಲಿ, ಕಂಪನಿಯ ಪ್ರಸ್ತುತ ಮತ್ತು ಭವಿಷ್ಯದ ವ್ಯಾಪಕ ಕಾರ್ಯಾಚರಣೆಗಳಿಗೆ ನಗರ ಕೇಂದ್ರಿತ ಹೆಸರು ಕೊಚ್ಚಿ ಸೂಕ್ತವಲ್ಲದ ಕಾರಣ 'ಕೇರಳ ಮೆಟ್ರೋ ರೈಲು' ಎಂಬ ಹೊಸ ಹೆಸರನ್ನು ಸೂಚಿಸಲಾಗಿದೆ ಎಂದು ಲೋಕನಾಥ್ ಬೆಹ್ರಾ ಸ್ಪಷ್ಟಪಡಿಸಿದರು.

