ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಹಾಗೂ ಮಹೇಶ್ವರೀ ಮಹಿಳಾ ಸಮಾಜ ವತಿಯಿಂದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ಕ್ಲಬ್ ಕಚೇರಿಯಲ್ಲಿ ಜರುಗಿತು. ಶ್ರೀ ಸತ್ಯಸಾಯಿ ಸೇವಾಸಮಿತಿ ಪೆರ್ಲ ಘಟಕದ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಮುಖ್ಯ ಅರ್ಚಕ ಎಂ. ವಿಷ್ಣು ನಾವಡ ಶಿಬಿರ ಉದ್ಘಾಟಿಸಿದರು. ಕ್ಲಬ್ಬಿನ ಕಾರ್ಯದರ್ಶಿ ನಿತ್ಯಾನಂದ ರೈ ಅಧ್ಯಕ್ಷತೆ ವಹಿಸಿದ್ದರು. ಶಿಬಿರ ವೈದ್ಯರಾದ ಡಾ. ಸತ್ಯನಾರಾಯಣ ಬಾಯಾರು, ಡಾ. ಕೃಷ್ಣಮೋಹನ ಬಿ.ಆರ್, ಶ್ರೀ ಸತ್ಯಸಾಯಿ ಸಏವಾ ಸಮಿತಿಯ ಸತ್ಯನಾರಾಯಣ ಹೆಗ್ಡೆ, ಗೋಪಾಲಕೃಷ್ಣ ಭಟ್ ಗೋಲಿತ್ತಡ್ಕ, ವೆಂಕಟೇಶ ಶೆಣೈ ಕುಂಬಳೆ, ಜಗದೀಶ್, ಕ್ಲಬ್ಬಿನ ಕೋಶಾಧಿಕಾರಿ ಹರೀಶ್ ಪೂಜಾರಿ ಬಜಕೂಡ್ಲು, ವಕೀಲ ಸಂತೋಷ್ ಕುಮಾರ್, ಹರೀಶ್ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಡಾ. ಸತ್ಯನಾರಾಯಣ ಬಯರು ಹಾಗೂ ಡಾ. ಕೃಷ್ಣ ಮೋಹನ ಬಿ.ಆರ್ ಶಿಬಿರಾರ್ಥಿಗಳ ತಪಾಸಣೆ ನಡೆಸಿ, ಉಚಿತ ಔಷಧ ವಿತರಿಸಲಾಯಿತು. ಶಿಬಿರದಲ್ಲಿ 60ಕ್ಕೂ ಹೆಚ್ಚುಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.



