HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಪ್ರೆಸ್ ಕ್ಲಬ್ನಲ್ಲಿ  ಕಾಯರ್ಾಗಾರ
    ಕಾಸರಗೋಡು: ಕಾಸರಗೋಡು ಜಿಲ್ಲಾ  ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ  ಮಕ್ಕಳ ಸಂರಕ್ಷಣಾ ಘಟಕ, ಕಾಸರಗೋಡು ಪ್ರೆಸ್ಕ್ಲಬ್ ಇವುಗಳ ಸಂಯುಕ್ತ  ಆಶ್ರಯದಲ್ಲಿ ಕಾಸರಗೋಡು ಪ್ರೆಸ್ಕ್ಲಬ್ ಸಭಾಂಗಣದಲ್ಲಿ  `ಪತ್ರಕರ್ತರಿಗಾಗಿ ಸಮೀಕ್ಷೆ' ಎಂಬ ಹೆಸರಿನಲ್ಲಿ ಕಾಯರ್ಾಗಾರ ನಡೆಯಿತು. 
    ಮಕ್ಕಳು ಒಳಪಡುವ ಆಕ್ರಮಣಗಳು ಮತ್ತು  ಮಕ್ಕಳ ಮೇಲೆ ನಡೆಯುವ ಆಕ್ರಮಣಗಳ ಕುರಿತು ಪತ್ರಿಕೆಗಳಲ್ಲಿ  ಬರಬೇಕಾದ ಸುದ್ದಿಗಳ ಬಗ್ಗೆ  ಪತ್ರಕರ್ತರಲ್ಲಿ  ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು.
   ಕಾಯರ್ಾಗಾರವನ್ನು  ಜಿಲ್ಲಾ  ಚೈಲ್ಡ್ ವೆಲ್ಪೇರ್ ಸಮಿತಿಯ ಅಧ್ಯಕ್ಷೆ  ಮಾಧುರಿ ಎಸ್.ಬೋಸ್ ಉದ್ಘಾಟಿಸಿ ಮಾತನಾಡಿದರು. ಪ್ರೆಸ್ಕ್ಲಬ್ ಅಧ್ಯಕ್ಷ  ಟಿ.ಎ.ಶಾಫಿ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್ಕ್ಲಬ್ ಕಾರ್ಯದಶರ್ಿ ವಿನೋದ್ ಪಾಯಂ, ಚೈಲ್ಡ್ ಲೈನ್ ನೋಡಲ್ ಸಮನ್ವಯಾಧಿಕಾರಿ ಅನೀಷ್ ಜೋಸ್ ಮತ್ತಿತರರು ಶುಭಹಾರೈಸಿದರು. ಪಿ.ಬಿಜು ಸ್ವಾಗತಿಸಿ, ಎಂ.ಶ್ರೀಜಿತ್ ವಂದಿಸಿದರು.
    ಬಳಿಕ ವಿವಿಧ ವಿಷಯಗಳ ಕುರಿತು ಅಶ್ರಫ್ ಕಾವಿಲ್ ಮಾತನಾಡಿದರು. ಅಲ್ಲದೆ ಮಕ್ಕಳು ಮತ್ತು  ಮಾಧ್ಯಮಗಳು ಎಂಬ ವಿಷಯದ ಬಗ್ಗೆ  ಮುಕ್ತ  ಸಂವಾದ ಕಾರ್ಯಕ್ರಮ ನಡೆಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries