HEALTH TIPS

ಫೆ.25 ರಿಂದ 28 ರ ವರೆಗೆ ರತ್ನಗಿರಿಯಲ್ಲಿ ಕಾಲಾವಧಿ ಕಳಿಯಾಟ ಮಹೋತ್ಸವ

       ಬದಿಯಡ್ಕ: ಮುಖಾರಿ ಮುವಾರಿ ಸಮುದಾಯದ ರತ್ನಗಿರಿ ಶ್ರೀ ಕುದುರೆಕ್ಕಾಳಿ ಭಗವತಿ ಕ್ಷೇತ್ರದ ಕಾಲಾವ„ ಕಳಿಯಾಟ ಮಹೋತ್ಸವವು ಫೆ.25 ರಿಂದ 28 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
       ಫೆ.25 ರಂದು ಪೂರ್ವಾಹ್ನ ಗಣಪತಿ ಹೋಮ, ಶುದ್ಧಿಕಲಶ, ಪ್ರತಿಷ್ಠಾ ದಿನಾಚರಣೆ, 10 ಗಂಟೆಗೆ ಹಸಿರುವಾಣಿ ಹೊರೆಕಾಣಿಕೆ, ಶೋಭಯಾತ್ರೆಯೂ ನೀರ್ಚಾಲು ಅಶ್ವತ್ಥ ಕಟ್ಟೆಯಿಂದ ಶ್ರೀ ಕ್ಷೇತ್ರಕ್ಕೆ ವಾದ್ಯಘೋಷಗಳೊಂದಿಗೆ ನಡೆಯಲಿದೆ. ನಂತರ ತುಲಾಭಾರ ಸೇವೆ, ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯುವುದು.
       ಫೆ.26 ರಂದು ಬೆಳಗ್ಗೆ ವಿವಿಧ ಸಂಘಗಳಿಂದ ಭಜನೆ, 11.30 ರಿಂದ ಶ್ರೀ ಕುದುರೆಕ್ಕಾಳಿ ಭಗವತಿಗೆ ತಂಬಿಲ, ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 4 ರಿಂದ ಬಬ್ಬರಿಯ ಕಟ್ಟೆಯಲ್ಲಿ ತಂಬಿಲ, ರಾತ್ರಿ 7 ರಿಂದ ನೃತ್ಯ ಕಾರ್ಯಕ್ರಮ, 9 ರಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಇಳಿಯುವುದು, ನಂತರ ಶ್ರೀವಿಷ್ಣುಮೂರ್ತಿ ದೈವದ ಕುಳ್ಚಾಟ, 27 ರಂದು ಪೂರ್ವಾಹ್ನ ಶ್ರೀ ವಿಷ್ಣುಮೂರ್ತಿ ದೈವದ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 8 ಕ್ಕೆ ಶ್ರೀ ರಕ್ತ ಚಾಮುಂಡಿ ದೈವದ ತೊಡಙಲ್, 9.30 ರಿಂದ ಯಕ್ಷಗಾನ ಬಯಲಾಟ, 28 ರಂದು ಪೂರ್ವಾಹ್ನ ಶ್ರೀ ರಕ್ತ ಚಾಮುಂಡಿ ದೈವದ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 3 ಕ್ಕೆ ಗುಳಿಗನ ಕೋಲದೊಂದಿಗೆ ಕಳಿಯಾಟ ಮಹೋತ್ಸವ ನಡೆಯುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries