HEALTH TIPS

ಭಗವಂತನ ನಾಮಸ್ಮರಣೆ ಸನ್ಮಾರ್ಗದತ್ತ ಒಯ್ಯುವಲ್ಲಿ ಸಹಕಾರಿ



        ಕಾಸರಗೋಡು: ಜನಸಾಮಾನ್ಯರ ದುಸ್ತರ ಬದುಕಿನ ಜಂಜಾಟದ ಮಧ್ಯೆ ಮನಸ್ಸಿಗೆ ಹಿತ ನೀಡುವಲ್ಲಿ ಭಗವಂತನ ನಾಮಸ್ಮರಣೆ ನಮ್ಮನ್ನು ಸನ್ಮಾರ್ಗದತ್ತ ಒಯ್ಯುವಲ್ಲಿ ಸಹಕಾರಿಯಾಗಲಿದೆ ಎಂದು ಕುಂದಾಪುರ ಕೋಡಿಯ ಶ್ರೀ ರಾಮಾಮೃತ ಭಜನಾ ಮಂಡಳಿಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ಹೇಳಿದರು.
      ಅವರು ಕೂಡ್ಲು ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರಗಿದ ಕುಣಿತ ಭಜನಾ ತರಬೇತಿ ಶಿಬಿರದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
       ಭಜನೆಯಿದ್ದಲ್ಲಿ ವಿಭಜನೆಯಿಲ್ಲ. ಕರಾವಳಿಯ ಬದುಕಿನ ಬವಣೆಯನ್ನು ಅನುಭವಿಸಿ ಅರಿತ ಅವರು ಇಂತಹಾ ಪ್ರತಿಕೂಲ ಪರಿಸ್ಥಿತಿಯಲ್ಲೂ ಭಗವಂತನ ನಾಮಸ್ಮರಣೆಯಿಂದಾಗಿ ಜೀವನದ ಪಥದಲ್ಲಿ ಉತ್ತುಂಗಕ್ಕೆ ಏರಿಸುವಲ್ಲಿ ಭಜನೆಯ ಪ್ರಭಾವವನ್ನು ಸಾಮೀಪ್ಯದಿಂದ ಅನುಭವಿಸಿದ ಬಗೆಯನ್ನು ವಿವರಿಸಿದರು.
     ವಿಷ್ಣು ಶ್ಯಾನುಭೋಗ್ ವಿಷ್ಣುಮಂಗಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಶಾಂತ್ ಕುಮಾರ್ ಕೋಡಿ, ನವೀನ್, ಕಿರಣ್, ರವಿ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದರು. ವೀಣಾ ಪ್ರಸನ್ನ ಶ್ಯಾನುಭೋಗ್ ಉಪಸ್ಥಿತರಿದ್ದರು. ಬಿ.ಸುರೇಶ್ ನಾೈಕ್ ಕೂಡ್ಲು ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು. ಮಾಲತಿ ಜಗದೀಶ್ ವಂದಿಸಿದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries