HEALTH TIPS

ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಾವೇಶ-ಭಾಷೆ, ಶಿಕ್ಷಣ ಸಂಸ್ಕøತಿಯ ಮೂಲ ಬೇರು : ಆಯಿಷಾ ಪೆರ್ಲ

 
         ಕಾಸರಗೋಡು: ಅಚ್ಚ ಕನ್ನಡ ಪ್ರದೇಶವಾದ ಗಡಿನಾಡು ಕಾಸರಗೋಡಿನಲ್ಲಿ ಹಲವು ಕಾರಣಗಳಿಂದ ದಿನದಿಂದ ದಿನಕ್ಕೆ ಕನ್ನಡ ಭಾಷೆ, ಸಂಸ್ಕøತಿ ಅವನತಿಯತ್ತ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಕನ್ನಡಿಗ ಎಚ್ಚೆತ್ತುಕೊಂಡು ಕನ್ನಡ ಭಾಷೆ ಮತ್ತು ಸಂಸ್ಕøತಿಯನ್ನು ಉಳಿಸಲು ಹೋರಾಟ ನಡಸಬೇಕಾದ ಅನಿವಾರ್ಯತೆ ಎದುರಾಗಿದೆ. ಭಾಷೆ ಉಳಿದರೆ ಮಾತ್ರವೇ ಸಂಸ್ಕøತಿ ಉಳಿಯಲು ಸಾಧ್ಯ. ಈ ಹಿನ್ಲೆಯಲ್ಲಿ ಭಾಷೆಯನ್ನು ಉಳಿಸಿ, ಶಿಕ್ಷಣವನ್ನು ಪಡೆದುಕೊಂಡು ಸಂಸ್ಕøತಿಯನ್ನು ಬೆಳೆಸೋಣ ಎಂದು ಎಣ್ಮಕಜೆ ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ, ವಾಗ್ಮಿ ಆಯಿಷಾ ಎ.ಎ.ಪೆರ್ಲ ಅವರು ಹೇಳಿದರು.
      ಕರ್ನಾಟಕ ನವ ನಿರ್ಮಾಣ ಸೇನೆ ಬೆಂಗಳೂರು ಇದರ ನೇತೃತ್ವದಲ್ಲಿ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ, ಕನ್ನಡ ಗ್ರಾಮ ಇದರ ಸಹಯೋಗದಲ್ಲಿ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಾವೇಶ-2019 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
       ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ಕನ್ನಡದೋಜ ಡಾ.ಕಯ್ಯಾರ ಕಿಞ್ಞಣ್ಣ ರೈ, ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬ ಮೊದಲಾದವರನ್ನು ಕೊಡುಗೆಯಾಗಿ ನೀಡಿದ ಕಾಸರಗೋಡು ಯಾವತ್ತೂ ಕನ್ನಡದ ನಾಡು. ಇಲ್ಲಿ ಕನ್ನಡದ ಕಂಪು ದಿನಾ ಪಸರಿಸಬೇಕು. ಕಾಸರಗೋಡಿನಲ್ಲಿ ಬೇರೆ ಬೇರೆ ಭಾಷೆಯನ್ನಾಡುತ್ತಿದ್ದರೂ ಎಲ್ಲರ ಸಂಸ್ಕøತಿ ಕನ್ನಡ. ಕಾಸರಗೋಡು ಸಾಮರಸ್ಯಕ್ಕೂ ಮಾದರಿ ಪ್ರದೇಶ. ಅಂಗನವಾಡಿಗಳಲ್ಲಿ ಕನ್ನಡ ಬಲ್ಲ ಅಧ್ಯಾಪಕರನ್ನೇ ನೇಮಿಸಬೇಕು, ಸರಕಾರದ ಆದೇಶ, ಸುತ್ತೋಲೆಗಳೆಲ್ಲ ಕನ್ನಡದಲ್ಲೇ ಲಭಿಸುವಂತಾಗಬೇಕು. ಅದಕ್ಕೆ ಕನ್ನಡಿಗರೆಲ್ಲ ಒಂದೇ ಛತ್ರದಡಿ ಹೋರಾಟ ನಡೆಸಬೇಕಾಗಿದೆ ಎಂದರು.
      ಕಾರ್ಯಕ್ರಮವನ್ನು ಜಿ>ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಭಾಷೆ ಉಳಿವಿನ ಬಗ್ಗೆ ಆತಂಕದಲ್ಲಿದ್ದೇವೆ. ಬೇರೊಂದು ಪ್ರಭಾವಿ ಸಂಸ್ಕøತಿಯತ್ತ ಮುಖ ಮಾಡುತ್ತಿರುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಭಾಷೆ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು. ಪ್ರಸ್ತುತ ಪುಸ್ತಕ ಓದುವುದನ್ನು ಬಿಟ್ಟಿದ್ದೇವೆ. ಮಾತನಾಡುವುದನ್ನು ಬಿಟ್ಟಿದ್ದೇವೆ. ಸಾಮಾಜಿಕ ಜಾಲ ತಾಣದಲ್ಲಿ ಮುಳುಗಿದ್ದೇವೆ. ಈ ಕಾರಣದಿಂದಲೂ ನಮ್ಮ ಭಾಷೆ, ಸಂಸ್ಕøತಿ ಮರೆತು ಹೋಗುವಂತಾಗುತ್ತಿದೆ. ಈ ಹಿನ್ನೆಲೆಯಲ್ಲಿ ಓದುವ ಮತ್ತು ಮಾತನಾಡುವ ಸವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದರು.
       ಕಾರ್ಯಕ್ರಮದಲ್ಲಿ ಕಾಸರಗೋಡು ನಗರಸಭಾ ಸದಸ್ಯ ಶಂಕರ ಕೆ, ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ, ಕೋಟೆಕಣಿಯ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಸಂಚಾಲಕ ಗುರುಪ್ರಸಾದ್ ಕೋಟೆಕಣಿ, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ತಾರಾನಾಥ ಬೋಳಾರು, ಕೆಸಿಎನ್ ಚಾನೆಲ್ ನಿರ್ದೇಶಕ ಪುರುಷೋತ್ತಮ ನಾೈಕ್ ಮೊದಲಾದವರು ಶುಭಹಾರೈಸಿದರು.
        ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಆಶಯ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಪ್ರೇಮಲತಾ ಗೋಕುಲದಾಸ್ ಕುಂಬಳೆ ಅವರನ್ನು ಗೌರವಿಸಲಾಯಿತು. 
ಸಮಾವೇಶದ ಬಳಿಕ ಗಡಿನಾಡ ಚುಟುಕು ಕವಿಗೋಷ್ಠಿ ನಡೆಯಿತು. ಕರಾವಳಿ ಕಾವ್ಯ ಸೌರಭ, ಕರಾವಳಿ ಸಾಂಸ್ಕøತಿಕ ವೈಭವ, ನೃತ್ಯ ವೈವಿಧ್ಯ, ಕರಾವಳಿ ಸಂಕೀರ್ತನಾ ವೈವಿಧ್ಯ, ಚಿತ್ರಕಲಾ ಪ್ರದರ್ಶನ ಮೊದಲಾದವು ನಡೆಯಿತು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಸ್ವಾಗತಿಸಿದರು. ಸಂಘಟಕ ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಕಾಸರಗೋಡು ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries