HEALTH TIPS

ವಿದ್ಯುತ್ ಉಪಕರಣಗಳ ಸೂಕ್ತ ಬಳಕೆಯು ವಿದ್ಯುತ್ ಉಳಿತಾಯಕ್ಕೆ ಕಾರಣವಾಗಿದೆ-ಕೃಷ್ಣವೇಣಿ ಟೀಚರ್


        ಮಂಜೇಶ್ವರ: ಗುವೆದಪಡ್ಪು ಪ್ರೇರಣಾ ಗ್ರಂಥಾಲಯದ ನೇತೃತ್ವದಲ್ಲಿ ವಿದ್ಯುತ್ ಶಕ್ತಿ ಉಳಿತಾಯ ಜಾಗೃತಿ ಕಾರ್ಯಕ್ರಮ ಇತ್ತೀಚೆಗೆ ಗ್ರಂಥಾಲಯದಲ್ಲಿ ನಡೆಯಿತು.
      ಗ್ರಂಥಾಲಯದ ಗ್ರೌರವಾಧ್ಯಕ್ಷ ಗೋಪಾಲ ಅವರು ಸಮಾರಂಭವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶಿಕ್ಷಕಿ ಕೃಷ್ಣವೇಣಿ ಅವರು ಮಾತನಾಡಿ, ವಿದ್ಯುತ್ ಶಕ್ತಿಯ ಸಮರ್ಪಕ ಬಳಕೆಯ ನಿಟ್ಟಿನಲ್ಲಿ ಇಂದು ಹಲವು ತಂತ್ರಜ್ಞಾನಗಳ ಪ್ರಯೋಗಗಳು ನಡೆಯುತ್ತಿದೆ. ತೀವ್ರ ಕಳವಳಕಾರಿಯಾಗಿರುವ ವಿದ್ಯುತ್ ಲಭ್ಯತೆಯ ಬಗ್ಗೆ ಜವಾಬ್ದಾರಿಯುತರಾಗಿ ಜನರು ಬಳಕೆ ಮಾಡುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ವಿದ್ಯುತ್ ಉಪಕರಣಗಳ ಸೂಕ್ತ ಬಳಕೆಯಿಂದ ವಿದ್ಯುತ್ ಉಳಿತಾಯ ಸಾಧ್ಯವಾಗಿದೆ ಎಂದು ತಿಳಿಸಿದರು.
     ಗ್ರಂಥಾಲಯದ ಅಧ್ಯಕ್ಷ ಜಯರಾಮ ಕೊಣಿಬೈಲು ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಯಶೋಧ ಟೀಚರ್ ಕತ್ತರಿಕೋಡಿ, ಮಾದವ ಪರಂಬಳ, ಮೋನಪ್ಪ ಕೊಣಿಬೈಲು, ಜಮೀಲಾ ಗುವೆದಪಡ್ಪು ಮೊದಲಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಜಾಗೃತಿ ತರಗತಿ ನಡೆಯಿತು. ಗ್ರಂಥಾಲಯದ ಕಾರ್ಯದರ್ಶಿ ಅಶೋಕ ಕೊಡ್ಲಮೊಗರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಧುಶ್ರೀ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries