HEALTH TIPS

ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಸಭಾ ಭವನದಲ್ಲಿ ಡಾ.ಶ್ರೀಧರ ಏತಡ್ಕ ಅವರಿಗೆ ಜ್ಞಾನ ಭೂಷಣ ಪದವಿ ಪುರಸ್ಕಾರ- ನಮ್ಮ ಆಚಾರ ಪರಂಪರೆಗಳನ್ನು ಉಳಿಸಿಕೊಳ್ಳಬೇಕು : ಸುಕುಮಾರನ್

         ಬದಿಯಡ್ಕ: ಆಧುನಿಕ ಯುಗದಲ್ಲಿ ಹಳೆಯ ಸಂಪ್ರದಾಯ, ಪರಂಪರೆಯನ್ನು ಮರೆಯದೆ, ಅದನ್ನು ಉಳಿಸಿ ಬೆಳೆಸಲು ಯುವಜನತೆ ಮುಂದೆಬರಬೇಕು. ಹಿಂದೂ ಸಂಸ್ಕಾರ, ಆಚಾರಗಳನ್ನು ಮುಂದಿನ ತಲೆಮಾರಿಗೆ ತಿಳಿಸಿಕೊಡುವಲ್ಲಿ ನಾವೆಲ್ಲ ಒಂದಾಗಬೇಕು ಎಂದು ಸುಕುಮಾರನ್ ಪೆರಿಯಾಚ್ಚೂರ್ ಹೇಳಿದರು.
    ಪೆÇಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಆಡಳಿತ ಸಮಿತಿ ಹಾಗೂ ಚೀರುಂಬಾ ಭಗವತಿ ಪ್ರವಾಸಿ ಅಸೋಸಿ0iÉುೀಶನ್ ಆಶ್ರಯದಲ್ಲಿ ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಸಭಾ ಭವನದಲ್ಲಿ ಜರಗಿದ ಜ್ಞಾನಶ್ರೀ ಪ್ರಶಸ್ತಿ ಪ್ರಧಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
     ಧಾರ್ಮಿಕವಾಗಿಯೂ, ಬೌದ್ಧಿಕವಾಗಿ ಯುವಜನತೆ ವಿಕಾಸಗೊಳ್ಳಬೇಕಿದೆ. ಊರಿನಲ್ಲಿ ಜರಗುವ ಕಾರ್ಯಕ್ರಮಗಳಲ್ಲಿ ಸಂಸ್ಕಾರಭರಿತರಾಗಿ ಪಾಲ್ಗೊಳ್ಳುವ ಮೂಲಕ ಇತರರಿಗೆ ಮಾದರಿಯಾದರೆ ಮಾತ್ರ ಮುಂದಿನ ಜನಾಂಗವು ಅದನ್ನು ಅನುಸರಿಸುತ್ತದೆ. ಪ್ರತೀ ಮನೆಯಿಂದ ಒಬ್ಬರಾದರೂ ಸರಕಾರೀ ಉದ್ಯೋಗ ಲಭಿಸುವಂತೆ ಕಾರ್ಯಪ್ರವೃತ್ತರಾದರೆ ಸಮಾಜ ಅಭಿವೃದ್ಧಿಯನ್ನು ಕಾಣಲಿದೆ ಎಂದರು. ಇದೇ ಸಂದರ್ಭದಲ್ಲಿ ತೀಯರ ಆರಾಧನೆಯಲ್ಲಿ ದ್ರಾವಿಡ ಸಂಕಲ್ಪ ಎಂಬ ವಿಷಯದಲ್ಲಿ ಡಾಕ್ಟರೇಟ್ ಪಡೆದ ಡಾ.ಶ್ರೀಧರ ಏತಡ್ಕ ಅವರಿಗೆ ಜ್ಞಾನ ಭೂಷಣ ಪದವಿಯನ್ನು ನೀಡಿ ಗೌರವಿಸಲಾಯಿತು.
     ಕಾರ್ಯಕ್ರಮವನ್ನು ಕ್ಷೇತ್ರದ ಹಿರಿಯ ಆಚಾರ ಸ್ಥಾನಿಕರಾದ ಅಂಬಾಡಿ ಕಾರ್ನವರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದ್ದರು. ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ರಾಘವನ್ ಕನಕತ್ತೋಡಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಸರಗೋಡು ವಿವೇಕಾನಂದ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎನ್.ಸತೀಶನ್, ಉದ್ಯಮಿ ಕೃಷ್ಣನ್ ಖತ್ತರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
      ರಾಮ ಮಾಸ್ತರ್ ಇಕ್ಕೇರಿ,  ಚಿರಿಯಂಡ ಬಡಕಾಜೆ, ಪುರುಷೋತ್ತಮ ಕೋಳಾರಿ, ಸುಧಾಕರ ಚೇಂಬೋಡು, ಚಂದ್ರಿಕಾ ಕೃಷ್ಣನ್, ಜನಾರ್ದನ ಭಂಡಾರವೀಡು ಮೊದಲಾದವರು ಮಾತನಾಡಿದರು. ಸುನಿಲ್ ಪುಂಡೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಶಿಧರ ಚೇಡಿಕಾನ ಸ್ವಾಗತಿಸಿ, ಗಂಗಾಧರ ಪಳ್ಳತ್ತಡ್ಕ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries