HEALTH TIPS

ಕಾಶ್ಮೀರ ಕಣಿವೆಗೆ ರೈಲಿನಲ್ಲಿ ಟ್ಯಾಂಕ್‌, ಫಿರಂಗಿ ಸಾಗಣೆ

ಜಮ್ಮು: ವಿಶೇಷ ರೈಲಿನ ಮೂಲಕ ಕಾಶ್ಮೀರ ಕಣಿವೆಗೆ ಟ್ಯಾಂಕ್‌ಗಳು ಮತ್ತು ಫಿರಂಗಿಗಳನ್ನು ಡಿ.16ರಂದು ಸಾಗಿಸುವ ಮೂಲಕ ಭಾರತೀಯ ಸೇನೆಯು ಪ್ರಮುಖ ಮೈಲಿಗಲ್ಲು ಸಾಧಿಸಿದೆ.

ಉತ್ತರ ರೈಲ್ವೆ ಇಲ್ಲಿಯವರೆಗೆ ಕಾಶ್ಮೀರದಿಂದ ಸೇಬುಗಳನ್ನು ಸಾಗಿಸಲು ಕಂಟೇನರ್‌ ಆಧಾರಿತ ವ್ಯಾಗನ್‌ಗಳು ಹಾಗೂ ವಾಹನಗಳು ಮತ್ತು ಸಿಮೆಂಟ್‌ ಪೂರೈಸಿದೆ.

ಇದು ಕಣಿವೆಯಲ್ಲಿ ವ್ಯಾಪಾರ ಮತ್ತು ಕೈಗಾರಿಕೆಗಳನ್ನು ಬೆಂಬಲಿಸುವ ಮತ್ತೊಂದು ಉಪಕ್ರಮವನ್ನು ಸೂಚಿಸುತ್ತದೆ.

ಹೊಸ ರೈಲು ಮಾರ್ಗವು ಸೇನಾ ಸಾಮಗ್ರಿಗಳನ್ನು ಸಾಗಿಸಲು ಸಿದ್ಧವಾಗಿದೆಯೇ ಎಂದು ಪರೀಕ್ಷಿಸುವ ಉದ್ದೇಶದಿಂದ ಟ್ಯಾಂಕ್‌ಗಳು, ಫಿರಂಗಿಗಳು ಮತ್ತು ಡೋಜರ್‌ಗಳನ್ನು ಜಮ್ಮು ಪ್ರದೇಶದಿಂದ ಕಾಶ್ಮೀರದ ಅನಂತ್‌ನಾಗ್‌ಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಯಿತು ಎಂದು ಎಡಿಜಿಪಿಐ 'ಎಕ್ಸ್‌'ನಲ್ಲಿ ತಿಳಿಸಿದೆ.

ರೈಲ್ವೆ ಇಲಾಖೆ ಜೊತೆಗಿನ ಸಮನ್ವಯದಿಂದ ಇದು ಕಾರ್ಯಗತಗೊಂಡಿದೆ. ಉಧಂಪುರ- ಶ್ರೀನಗರ- ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯಿಂದಾಗಿ ಭಾರತೀಯ ಸೇನೆಯು ಉತ್ತರದ ಗಡಿಗಳಿಗೆ ಬೇಕಾದ ಸಾಮಗ್ರಿಗಳನ್ನು ಅತ್ಯಂತ ವೇಗವಾಗಿ ತಲುಪಿಸಲು ಸಾಧ್ಯವಾಗಿದೆ. ಗಡಿಯಲ್ಲಿ ಸದಾ ಸನ್ನದ್ಧವಾಗಿರಲು ಸಹಕಾರಿಯಾಗಿದೆ ಎಂದು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries