HEALTH TIPS

ಉಪಜಿಲ್ಲಾ ಮಟ್ಟದ ವಿಜ್ಞಾನ ವಿಚಾರ ಸಂಕಿರಣ ಸ್ಪರ್ಧೆ

       ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನ ವಿಚಾರ ಸಂಕಿರಣ ಸ್ಪರ್ಧೆಯು ಮಂಜೇಶ್ವರ ಬಿಆರ್‍ಸಿಯಲ್ಲಿ ನಡೆಯಿತು.
        ಮಂಜೇಶ್ವರ ಬ್ಲಾಕ್ ಯೋಜನಾಧಿಕಾರಿ  ವಿಜಯ ಕುಮಾರ್ ಪಾವಳ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವವನ್ನು ಬೆಳೆಸಲು ಈ ಸ್ಪರ್ಧೆಯುವ ತುಂಬಾ ಸಹಕಾರಿ ಎಂದು ಅಭಿಪ್ರಾಯಪಟ್ಟರು.
       ಉದಯ ಹೈಯರ್ ಸೆಕೆಂಡರಿ ಶಾಲೆಯ ಇಶಿತಾ ವಿ.ಆರ್. ಪ್ರಥಮ, ಮೀಯಪದವು ಎಸ್.ವಿ.ವಿ.ಎಚ್.ಎಸ್. ಶಾಲೆಯ ಎಲ್ನ ಕ್ರಿಸ್ಟಿನಾ ದ್ವಿತೀಯ, ಮೂಡಂಬೈಲ್ ಜಿ.ಎಚ್.ಎಸ್. ಶಾಲೆಯ ರಕ್ಷಿತಾ ಎಂ.ಜೆ. ತೃತೀಯ ಸ್ಥಾನ ಪಡೆದುಕೊಂಡರು.
    ರವಿಶಂಕರ ದೊಡ್ಡಮಾಣಿ, ಡಾ.ಆರಾಧನಾ ಶ್ರೀಕೃಷ್ಣರಾಜ್ ಅವರು ತೀರ್ಪುಗಾರರಾಗಿ ಭಾಗವಹಿಸಿದರು. ಮುಳಿಂಜ ಶಾಲಾ ಮುಖ್ಯೋಪಾಧ್ಯಾಯರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ವಿಜ್ಞಾನ ಸಂಘದ ಕಾರ್ಯದರ್ಶಿ ಕೃಷ್ಣವೇಣಿ ಬಿ. ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಸುನಿತಾ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries