HEALTH TIPS

ಸಿಎಸ್ಆರ್ ನಿಧಿ ವಂಚನೆ: ಶಾಸಕ ನಜೀಬ್ ಕಾಂತಪುರಂ ವಿರುದ್ಧ ಪ್ರಕರಣ ದಾಖಲು

ಮಲಪ್ಪುರಂ: ರಾಜ್ಯಾದ್ಯಂತ ನಡೆದ ಸಿಎಸ್‍ಆರ್ ನಿಧಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆರಿಂದಲ್ಮಣ್ಣ ಪೆÇೀಲೀಸರು ಶಾಸಕ ನಜೀಬ್ ಕಾಂತಪುರಂ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪುಲಮಂಥೈತೋಳ್ ನಿವಾಸಿ ಅನುಪಮಾ ನೀಡಿದ ದೂರಿನ ಆಧಾರದ ಮೇಲೆ ಪೆÇೀಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಮುಸ್ಲಿಂ ಲೀಗ್ ಶಾಸಕನ ವಿರುದ್ಧ ವಂಚನೆ ಆರೋಪ ಹೊರಿಸಲಾಗಿದೆ. ಆರೋಪಿ ಅನಂತಕೃಷ್ಣನ್ ವಿರುದ್ಧ ಆಲುವಾ ಪೆÇಲೀಸ್ ಕ್ಲಬ್‍ನಲ್ಲಿ ರೇಂಜ್ ಡಿಐಜಿ ಮತ್ತು ಗ್ರಾಮೀಣ ಎಸ್‍ಪಿ ಜಂಟಿಯಾಗಿ ವಿಚಾರಣೆ ನಡೆಸಿದ್ದರು. ಸಿಎಸ್ಆರ್ ನಿಧಿಗೆ ಸಂಬಂಧಿಸಿದಂತೆ 450 ಕೋಟಿ ರೂಪಾಯಿ ವಂಚನೆ ನಡೆದಿದೆ ಎಂಬುದು ಪ್ರಸ್ತುತ ತೀರ್ಮಾನವಾಗಿದೆ.

ಪೆÇೀಲೀಸರು ಅನಂತುಕೃಷ್ಣನ್ ಅವರ ನಾಲ್ಕು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ. ಬೇನಾಮಿ ಖಾತೆಗಳು ಸೇರಿದಂತೆ ಇತರ ಖಾತೆಗಳ ಬಗ್ಗೆ ಪೆÇೀಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಂಬಂಧಿಕರ ಹೆಸರಿಗೆ ಹಣ ವರ್ಗಾವಣೆ ಆಗಿರುವುದು ಕೂಡ ಪತ್ತೆಯಾಗಿದೆ. ಈ ಖಾತೆಗಳನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಾಗುವುದು.

ಅನಂತುಕೃಷ್ಣನ್ ಅವರು ಇಡುಕ್ಕಿ ಮತ್ತು ಪಾಲಾದಲ್ಲಿ ಭೂಮಿ ಮತ್ತು ವಾಹನಗಳನ್ನು ಖರೀದಿಸಿರುವುದಾಗಿ ದೂರಲಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries