ಕಾಸರಗೋಡು: ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರ "ಯಾನ "ಕಾದಂಬರಿಯನ್ನು ಕನ್ನಡ ದಿಂದ ಮಲಯಾಳಕ್ಕೆ ಅನುವಾದ ನಡೆಸಿ ಯಾನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿಗೆ ಭಾಜನರಾದ ಕಾಸರಗೋಡಿನ ಕೆ.ವಿ ಕುಮಾರನ್ ಅವರೀಗೆ ಕಾಸರಗೋಡು ಕನ್ನಡ ಭವನದ ವತಿಯಿಂದ ಗೌರವ ಅಭಿನಂದನೆ ಸಲ್ಲಿಸಲಾಯಿತು.
ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ದಲ್ಲಿ ದ್ರಾವಿಡ ಭಾಷಾ ಅನುವಾದಕರ ಸಂಘ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ನಡೆದ ಮಲಯಾಳಂ -ಕನ್ನಡ ಅನುವಾದ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ಟೀಚರ್ ನೇತೃತ್ವ ವಹಿಸಿದ್ದರು. ಗೌರವಾಧ್ಯಕ್ಷ ಪತ್ರಕರ್ತ ಪ್ರದೀಪ್ ಬೇಕಲ್ ಅಭಿನಂದನಾ ಪತ್ರ ನೀಡಿ, ನಿಕಟಪೂರ್ವ ಅಧ್ಯಕ್ಷರಾದ ಸಾಹಿತಿ ರಾಧಾಕೃಷ್ಣ ಕೆ ಉಳಿಯತ್ತಡ್ಕ ಶಾಲು ಹೊದಿಸಿ, ಸ್ಥಾಪಕ ಅಧ್ಯಕ್ಷರಾದ ವಾಮನ್ ರಾವ್ ಬೇಕಲ್ ಸ್ಮರಣಿಕೆ ನೀಡಿ ಗೌರವಿಸಿದರು. ಮಲಯಾಳ ಸಾಹಿತಿ ರವೀಂದ್ರನ್ ಪಾಡಿ ಅಭಿನಂದನಾ ಭಾಷಣ ಮಾಡಿದರು.
ಡಿ ಬಿ ಟಿ ಎ ಅಧ್ಯಕ್ಷೆ ಡಾ ಸುಷ್ಮಾ ಶಂಕರ್ ಬೆಂಗಳೂರು, ಕಣ್ಣೂರು ವಿ ವಿ ಸೆನೆಟ್ ಸದಸ್ಯ ಡಾ.ರತ್ನಾಕರ ಮಲ್ಲಮೂಲೆ, ಕುಪ್ಪಮ್ ಯೂನಿವರ್ಸಿಟಿಯ ಡಾ.ಶಿವಕುಮಾರ್, ಡಿ ಬಿ ಟಿ ಎ ಪ್ರದಾನ ಕಾರ್ಯದರ್ಶಿ ಡಾ. ರೋಷನ್, ಕನ್ನಡ ಭವನ ಪ್ರಕಾಶನ, ಪ್ರಕಾಶಕಿ ಸಂದ್ಯಾ ರಾಣಿ ಉಪಸ್ಥಿತರಿದ್ದರು. ಕೆ ವಿ ಕುಮಾರನ್ ಇವರೀಗೆ 2024ರಲ್ಲಿ ಸಮಗ್ರ ಸಾಹಿತ್ಯ ವಿಭಾಗದಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಡಾ. ಕೋಟ ಶಿವರಾಮ್ ಕಾರಂತರ "ಚೋಮನ ದುಡಿ"ಮಲಯಾಳಕ್ಕೆ ಅನುವಾದ ಮಾಡಿದ ಮಲಯಾಳಂ ಕೃತಿ ಮೂರು ಲಕ್ಷಕ್ಕೂ ಅಧಿಕ ಕೃತಿಗಳು ಮಾರಾಟಗೊಂಡಿತ್ತು.


