ಕೊಚ್ಚಿ: ಕೇರಳೋತ್ಸವದಲ್ಲಿ ಬಾಲ್ಯ ವಿವಾಹ ವಿರೋಧಿ ಟ್ಯಾಬ್ಲೋ ಪ್ರದರ್ಶನವನ್ನು ಎಸ್ಡಿಪಿಐ ವಿರೋಧಿಸಿದೆ. ಆ ಸ್ತಬ್ಧಚಿತ್ರವು ಮುಸ್ಲಿಂ ಸಮುದಾಯಕ್ಕೆ ಅವಮಾನಕರವಾಗಿದೆ ಎಂದು ಅವರು ವಾದಿಸುತ್ತಾರೆ.
ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಎಸ್.ಡಿ.ಪಿ.ಐ ಕೋತಮಂಗಲಂ ಮಂಡಲ ಸಮಿತಿ ಉಪಾಧ್ಯಕ್ಷ ಅಬುಲೈಸ್ ಮಂಗಲತ್ ಪೋಲೀಸರಿಗೆ ದೂರು ನೀಡಿದ್ದಾರೆ.
ಈ ಟ್ಯಾಬ್ಲೋ ಇಸ್ಲಾಂ ಮತ್ತು ಮುಸ್ಲಿಂ ಸಮುದಾಯವನ್ನು ಅವಮಾನಿಸುತ್ತದೆ ಮತ್ತು ಭಕ್ತರ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮುಸ್ಲಿಂ ಸಮುದಾಯದಲ್ಲಿ ಬಾಲ್ಯವಿವಾಹ ಅಸ್ತಿತ್ವದಲ್ಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.
ಇಸ್ಲಾಮಿಕ್ ನಂಬಿಕೆಗಳು ಮತ್ತು ಆಚರಣೆಗಳನ್ನು ಮತ್ತು ಆ ಮೂಲಕ ಸಮುದಾಯವನ್ನು ಸಮಾಜದ ಮುಂದೆ ಅನಾಗರಿಕ ಎಂದು ಬಿಂಬಿಸುವ ಗುರಿಯನ್ನು ಹೊಂದಿರುವ ಇಂತಹ ಪ್ರಚಾರವು ದುರುದ್ದೇಶಪೂರಿತ ಮತ್ತು ಅಪಾಯಕಾರಿ. ಜನರು ಇಂತಹ ಸುಳ್ಳು ಮತ್ತು ದಾರಿತಪ್ಪಿಸುವ ಪ್ರಚಾರವನ್ನು ತಿರಸ್ಕರಿಸಬೇಕು ಮತ್ತು ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಬುಲೈಸ್ ಮಂಗಲತ್ ಹೇಳಿರುವರು.
ಕೇರಳೋತ್ಸವದ ಸಾಂಸ್ಕøತಿಕ ಮೆರವಣಿಗೆಯಲ್ಲಿ ಈ ಟ್ಯಾಬ್ಲೋವನ್ನು ಪ್ರದರ್ಶಿಸಲಾಯಿತು. ಈ ಟ್ಯಾಬ್ಲೋದಲ್ಲಿ ಪೇಟ ಧರಿಸಿದ ಮುಸ್ಲಿಂ ವ್ಯಕ್ತಿ ಮತ್ತು ಪೇಟ ಧರಿಸಿದ ಪುಟ್ಟ ಹುಡುಗಿ ಕೈ ಹಿಡಿದು ಕುಳಿತಿರುವುದನ್ನು ತೋರಿಸಲಾಗಿದೆ.
ಏತನ್ಮಧ್ಯೆ, ಗೋಧ್ರಾ ಗಲಭೆಯನ್ನು ಭಯೋತ್ಪಾದನೆಯನ್ನು ಬೆಂಬಲಿಸಿದ ಎಂಬುರಾನ್ ಚಿತ್ರದ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಾಗ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಎಚ್ಚರಿಕೆ ನೀಡಿದವರು ಈಗ ಟ್ಯಾಬ್ಲೋ ವಿರುದ್ಧ ಸಿಡಿದೆದ್ದಿದ್ದಾರೆ.


