HEALTH TIPS

ತಿರುವನಂತಪುರಂ - ಬೆಂಗಳೂರು ವಂದೇ ಭಾರತ್ ಸ್ಲೀಪರ್ ರೈಲು ಸಾಕಾರತೆಯತ್ತ: ದಕ್ಷಿಣ ರೈಲ್ವೆ ಜನರಲ್ ಮ್ಯಾನೇಜರ್ ರಿಂದ ಲಿಖಿತ ಭರವಸೆ: ಸಂಸದ ಕೋಡಿಕುನ್ನಿಲ್ ಸುರೇಶ್

ತಿರುವನಂತಪುರಂ: ತಿರುವನಂತಪುರಂ - ಬೆಂಗಳೂರು ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಸಾಕಾರಗೊಳ್ಳುತ್ತಿದೆ. ತಿರುವನಂತಪುರಂ ಉತ್ತರ-ಬೆಂಗಳೂರು ಎಸ್.ಎಂ,ವಿ.ಟಿ. ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳ ಹಂಚಿಕೆಗೆ ಸಂಬಂಧಿಸಿದಂತೆ ಲಿಖಿತ ಭರವಸೆ ಲಭಿಸಿದೆ ಎಂದು ಸಂಸದ ಕೋಡಿಕುನ್ನಿಲ್ ಸುರೇಶ್ ತಿಳಿಸಿದ್ದಾರೆ.

ಹೊಸ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಸಂಬಂಧಿಸಿದಂತೆ ದಕ್ಷಿಣ ರೈಲ್ವೆ ಜನರಲ್ ಮ್ಯಾನೇಜರ್ ಅವರಿಂದ ಲಿಖಿತ ಭರವಸೆ ಲಭಿಸಿದೆ ಎಂದು ಕೋಡಿಕುನ್ನಿಲ್ ಸುರೇಶ್ ಮಾಹಿತಿ ನೀಡಿದ್ದಾರೆ.


ವಂದೇ ಭಾರತ್ ಸ್ಲೀಪರ್ ಸೇವೆ ತಿರುವನಂತಪುರಂ ಉತ್ತರದಿಂದ ಪ್ರಾರಂಭವಾಗಿ ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್‍ನಲ್ಲಿ ಕೊನೆಗೊಳ್ಳಲಿದೆ ಎಂದು ಸಂಸದ ಕೋಡಿಕುನ್ನಿಲ್ ಸುರೇಶ್ ತಿಳಿಸಿದ್ದಾರೆ. ತಿರುವನಂತಪುರಂ ಉತ್ತರದಿಂದ ಸಂಜೆ 7:30 ಕ್ಕೆ ಸೇವೆಯನ್ನು ಪ್ರಾರಂಭಿಸುವ ಸೆಮಿ-ಹೈಸ್ಪೀಡ್ ರೈಲು ಕೊಟ್ಟಾಯಂ ಮೂಲಕ ಬೆಂಗಳೂರು ತಲುಪುವ ರೀತಿಯಲ್ಲಿ ವೇಳಾಪಟ್ಟಿಯನ್ನು ಅಂತಿಮ ಅನುಮೋದನೆಗಾಗಿ ರೈಲ್ವೆ ಮಂಡಳಿಗೆ ಸಲ್ಲಿಸಲಾಗಿದೆ.

ತಿರುವನಂತಪುರಂ ಮತ್ತು ಬೆಂಗಳೂರು ನಡುವಿನ ರಾತ್ರಿಯ ವಂದೇ ಭಾರತ್ ಸ್ಲೀಪರ್ ರೈಲು ಸಾಕಾರಗೊಳ್ಳುವುದರೊಂದಿಗೆ, ಅಧ್ಯಯನ ಮತ್ತು ಉದ್ಯೋಗ ನಿಮಿತ್ತ ಬೆಂಗಳೂರಿಗೆ ಪ್ರಯಾಣಿಸುವ ಸಾವಿರಾರು ಕೇರಳೀಯರಿಗೆ ಇದು ಪ್ರಯೋಜನವನ್ನು ನೀಡಲಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries