ಕಾಸರಗೋಡು: ಬಾರಿಕ್ಕಾಡು ಪುದಿಯಪುರ ತರವಾಡಿನಲ್ಲಿ 2026 ರಲ್ಲಿ ನಡೆಯಲಿರುವ ಶ್ರೀ ವಯನಾಟ್ಟು ಕುಲವನ್ ತೆಯ್ಯಂಕಟ್ಟು ಮಹೋತ್ಸವದ ಅಗತ್ಯಕ್ಕಾಗಿ ಭತ್ತ ಬೆಳೆಸಲು ನೇಜಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನಿಡಲಾಯಿತು.
ಬಾರಿಕ್ಕಾಡು ಬಯಲಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಡಿ ಶ್ರೀ ಪುಳ್ಳಿಕರಿಂಗಾಳಿ ಭಗವತಿ ಕ್ಷೇತ್ರದ ಆಚಾರ ಸ್ಥಾನಿಕರ ಪ್ರಾರ್ಥನೆಯೊಂದಿಗೆ ನೇಜಿ ನೆಡುವ ಕಾರ್ಯಕ್ರಮ ಆರಂಬಿಸಲಾಯಿತು. ಪಾಡಿ ಶ್ರೀ ಪುಳ್ಳಿಕರಿಂಗಾಳಿ ಭಗವತೀ ಕ್ಷೇತ್ರದ ಆಡಳಿತ ಸಮಿತಿ ಪದಾಧಿಕಾರಿಗಳು, ಬಾರಿಕ್ಕಾಡು ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು, ಬಾರಿಕ್ಕಾಡು ಪುದಿಯಪುರ ತರವಾಡು ಸಮಿತಿ ಪದಾಧಿಕಾರಿಗಳು, ಭಕ್ತಜನರು ಪಾಲ್ಗೊಂಡಿದ್ದರು..


