ಬದಿಯಡ್ಕ: ಮಾವಿನಕಟ್ಟೆ ನಡುಮೂಲೆ ನಿವಾಸಿ ದಿ.ಕೋಮ ಮಣಿಯಾಣಿ-ಅಮರು ದಂಪತಿಗಳ ಪುತ್ರಿ ವಿಶಾಲಾಕ್ಷಿ(73) ಗುರುವಾರ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತರಾದರು.
ಮೃತರು ಅವಿವಾಹಿತರಾಗಿದ್ದು, ಗುರುವಾರ ಸಂಜೆ ಹಿತ್ತಲಿಗೆ ತೆರಳಿದಾಗ ಆಕಸ್ಮಿಕವಾಗಿ ಬಿದ್ದು ಈ ಅಪಮೃತ್ಯು ಸಂಭವಿಸಿದೆ. ಸಹೋದರ, ಇಬ್ಬರು ಸಹೋದರಿಯರ ಸಹಿತ ಬಂಧುಗಳನ್ನು ಅಗಲಿದ್ದಾರೆ. ಬದಿಯಡ್ಕ ಪೋಲೀಸರು ಮಹಜರು ನಡೆಸಿ ಬದಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೃತದೇಹ ರವಾನಿಸಿದ್ದಾರೆ.

-VISHALAKSHI.jpg)
