ಕುಂಬಳೆ: ಕಿದೂರು ಶಿವ ಸೇವಾ ವೃಂದ ಸಹಕಾರದೊಂದಿಗೆ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರವು ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ಕಳತ್ತೂರಿನಲ್ಲಿ ಜರಗಿತು. ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ (ರಿ)ಕೊಂಡೆವೂರು ಮತ್ತು ಒನ್ ಸೈಟ್ ಎಸ್ಸಿಲೋರ್ ಲಕ್ಷೊಟಿಕ ಪೌಂಡೇಶನ್ ಬೆಂಗಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಮಂಗಳೂರು ಡಾ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್(ರಿ) ಶ್ರೀ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ತಲಪಾಡಿ, ಮಂಗಳೂರು ಇದರ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು.
ಡಾ. ಪ್ರೇಮ್ ಶಿಬಿರ ಉದ್ಘಾಟಿಸಿದರು. ಶಿವ ಸೇವಾ ವೃಂದದ ಅಧ್ಯಕ್ಷ ಸದಾಶಿವ ರೈ ಕಿದೂರು ಮೇಗಿನ ಮನೆ ಅಧ್ಯಕ್ಷತೆ ವಹಿಸಿದ್ದರು. ಡಾ.ಶಶಾಂಕ್, ಡಾ .ಸುಶ್ಮಿತಾ, ಡಾ .ಗೋಪಿನಾಥನ್, ಪಿ. ಆರ್.ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ಆಚಾರ್ಯ ಪುತ್ತಿಗೆ, ವಾರ್ಡು ಸದಸ್ಯೆ ಪುಷ್ಪಲತಾ ಪಿ.ಶೆಟ್ಟಿ, ಗಂಗಾಧರ ಕೊಂಡೆವೂರು ಮತ್ತು ಕ್ಯಾಂಪ್ ಕೋರ್ಡಿನೇಟರ್ ಸಯ್ಯದ್ ಉಪಸ್ಥಿತರಿದ್ದರು.
ಮಹೇಶ್ ಪುಣಿಯೂರು ಸ್ವಾಗತಿಸಿದರು. ಅಶೋಕ ಪುಣಿಯೂರು ಕಾರ್ಯಕ್ರಮ ನಿರೂಪಿಸಿದರು. ಭರತ್ ರಾಜ್ ವಂದಿಸಿದರು. ಮುನ್ನೂರಕಿಂತಲೂ ಹೆಚ್ಚು ಜನ ಶಿಬಿರದಲ್ಲಿ ಭಾಗವಹಿಸಿದ್ದರು.

