ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ನವರಾತ್ರಿ ವೇದಿಕೆಯಲ್ಲಿ ನಡೆದ "ಕಾಸರಗೋಡು ದಸರಾ ಸಾಂಸ್ಕøತಿಕೋತ್ಸವ ಸರಣಿ ಕಾರ್ಯಕ್ರಮ ದಲ್ಲಿ ನಡೆದ "ಕಾಸರಗೋಡು ದಸರಾ ಕವಿಗೋಷ್ಠಿ ಯಲ್ಲಿ ಮೇರು ಕವಿ ಸಂಘಟಕಿ, ಕನ್ನಡ ಭವನ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷೆ ಶೋಭಾ ದಿನೇಶ್ ಉದ್ಯಾವರ ಅವರಿಗೆ"ಕಾಸರಗೋಡು ದಸರಾ ಕವಿ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾಸರಗೋಡು ಜಿಲ್ಲಾ ಘಟಕ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ ಕೊಳಚಪ್ಪೆ ಗೋವಿಂದ ಭಟ್ ಸಮಾರಂಭ ಉದ್ಘಾಟಿಸಿದರು. ಡಾ. ಸುರೇಶ್ ನೆಗಳಗುಳಿ ಅದ್ಯಕ್ಷತೆ ವಹಿಸಿದ್ದರು. ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್, ವಿರಾಜ್ ಅಡೂರ್, ದೇವರಾಜ್ ಆಚಾರ್ಯ, ವಿಶಾಲಾಕ್ಷ ಪುತ್ರಕಳ, ಸಂದ್ಯಾ ರಾಣಿ ಟೀಚರ್, ಡಾ. ಶಾಂತ ಪುತ್ತೂರು, ಜಯಾನಂದ ಪೆರಾಜೆ, ರೇಖಾ ಸುದೇಶ್ ರಾವ್, ಪ್ರಭಾವತಿ ಕೆದಿಲ್ಲಾಯ ಮೊದಲಾದವರು ಉಪಸ್ಥಿತರಿದ್ದರು.


