HEALTH TIPS

ಶಬರಿಮಲೆ ಚಿನ್ನ ದರೋಡೆ: ಉಣ್ಣಿಕೃಷ್ಣನ್ ಪೋತ್ತಿಗೆ 1.5 ಕೋಟಿ ರೂ. ಹಸ್ತಾಂತರಿಸಿರುವುದಾಗಿ ಆಭರಣ ವ್ಯಾಪಾರಿ ಗೋವರ್ಧನ್

ತಿರುವನಂತಪುರಂ: ಶಬರಿಮಲೆ ಚಿನ್ನ ದರೋಡೆಗೆ ಸಂಬಂಧಿಸಿದಂತೆ ಉಣ್ಣಿಕೃಷ್ಣನ್ ಪೋತ್ತಿ 1.5 ಕೋಟಿ ರೂ. ಹಸ್ತಾಂತರಿಸಿದ್ದಾರೆ ಎಂದು ಬಳ್ಳಾರಿಯ ಆಭರಣ ವ್ಯಾಪಾರಿ ಗೋವರ್ಧನ್ ಹೇಳಿದ್ದಾರೆ. ಗೋವರ್ಧನ್ ಈ ಬಗ್ಗೆ ವಿಶೇಷ ತನಿಖಾ ತಂಡಕ್ಕೆ ತಿಳಿಸಿದ್ದಾರೆ.

ಶಬರಿಮಲೆಯ ಚಿನ್ನ ಎಂದು ತನಗೆ ತಿಳಿದಿತ್ತು. ಶಬರಿಮಲೆಯಲ್ಲಿ ಅನ್ನದಾನ ಮಾಡಲು ಪರಿಹಾರವಾಗಿ 10 ಲಕ್ಷ ರೂ. ನೀಡಿದ್ದಾಗಿಯೂ ಗೋವರ್ಧನ್ ಹೇಳಿದ್ದಾರೆ.

ಶಬರಿಮಲೆಯಲ್ಲಿ ಚಿನ್ನ ಬೇರ್ಪಡಿಸುವ ಕಂಪನಿಯಾದ ಚೆನ್ನೈನಲ್ಲಿರುವ ಸ್ಮಾರ್ಟ್ ಕ್ರಿಯೇಷನ್ಸ್‍ನ ಮಾಲೀಕ ಗೋವರ್ಧನ್ ಮತ್ತು ಪಂಕಜ್ ಭಂಡಾರಿ ಪ್ರಸ್ತುತ ಬಂಧನದಲ್ಲಿದ್ದಾರೆ. ಸಿಪಿಎಂ ಪತ್ತನಂತಿಟ್ಟ ಜಿಲ್ಲಾ ಸಮಿತಿ ಸದಸ್ಯ, ಮಾಜಿ ಶಾಸಕ ಹಾಗೂ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಎ ಪದ್ಮಕುಮಾರ್, ಸಿಪಿಎಂ ಸಹವರ್ತಿ ಹಾಗೂ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಎನ್.ವಾಸು, ಮಾಜಿ ಆಡಳಿತಾಧಿಕಾರಿ ಮುರಾರಿ ಬಾಬು, ತಿರುವಾಭರಣಂ ಮಾಜಿ ಆಯುಕ್ತ ಕೆ.ಎಸ್.ಬೈಜು, ಶಬರಿಮಲೆ ಮಾಜಿ ಆಡಳಿತಾಧಿಕಾರಿ ಸುಧೀಶ್ ಕುಮಾರ್, ಮಾಜಿ ಆಡಳಿತಾಧಿಕಾರಿ ಶ್ರೀಕುಮಾರ್ ಕೂಡ ಪ್ರಕರಣದಲ್ಲಿ ರಿಮಾಂಡ್‍ನಲ್ಲಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries