ಕೊಟ್ಟಾಯಂ: ಪ್ರಮಾಣ ವಚನ ಸ್ವೀಕಾರಕ್ಕೆ ಗಂಟೆಗಳು ಬಾಕಿ ಇರುವಂತೆ ನೇಮಕಗೊಂಡ ಪಂಚಾಯತ್ ಸದಸ್ಯರು ನಿನ್ನೆ ನಿಧನರಾದರು. ಕೊಟ್ಟಾಯಂನ ಮೀನಾಡಂ ಪಂಚಾಯತ್ ಸದಸ್ಯರಾಗಿ ಗೆದ್ದಿದ್ದ ಪ್ರಸಾದ್ ನಾರಾಯಣನ್ (62) ನಿಧನರಾದವರು.
ಸಂಬಂಧಿಕರು ಸಾವಿಗೆ ಹೃದಯಾಘಾತ ಎಂದು ಹೇಳಿದ್ದಾರೆ. ಮೀನಾಡಂ 1 ನೇ ವಾರ್ಡ್ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದ ನಂತರ ಇಂದು ಪ್ರಮಾಣ ವಚನ ಸ್ವೀಕರಿಸಲಿರುವಾಗಲೇ ಅನಿರೀಕ್ಷಿತ ನಿಧನ ಸಂಭವಿಸಿದೆ. ಪತ್ನಿ, ಪುತ್ರನನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಮಂಗಳವಾರ ನಡೆಯಲಿದೆ.

