HEALTH TIPS

ರೈಲ್ವೆ ಪ್ರಯಾಣ ದರ ಹೆಚ್ಚಳ ತೀರ್ಮಾನ ಕೈಬಿಡುವಂತೆ ಆಗ್ರಹಿಸಿ ಡಿವೈಎಫ್‍ಐ ಧರಣಿ

ಕಾಸರಗೋಡು: ರೈಲ್ವೆ ಪ್ರಯಾಣದರ ಹೆಚ್ಚಳ ಖಂಡಿಸಿ ಡಿವೈಎಫ್‍ಐ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ರೈಲು ನಿಲ್ದಾಣ ಎದುರು ಪ್ರತಿಭಟನಾ ಧರಣಿ ನಡೆಯಿತು. ರೈಲ್ವೆ ಪ್ರಯಾಣ ದರ ಹೆಚ್ಚಳದಿಂದ ಜನಸಾಮಾನ್ಯರಿಗೆ ಹೆಚ್ಚಿನ ಸಂಕಷ್ಟ ಎದುರಾಗಿದ್ದು, ಪ್ರಯಾಣದರ ಏರಿಕೆ ನಿರ್ಧಾರದಿಂದ ಸರ್ಕಾರ ಹಿಮದೆ ಸರಿಯಬೇಕು ಎಂದು ಪ್ರತಿಬಟನಾಕಾರರು ಆಗ್ರಹಿಸಿದರು.  

ಪ್ರತಿಭಟನಾ ಮೆರವಣಿಗೆ ಮೂಲಕ ಕಾಸರಗೋಡು ರೈಲು ನಿಲ್ದಾಣಕ್ಕೆ ಆಗಮಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಘೋಷಣೆ ಮೊಳಗಿಸಿದರು. ಸಂಘಟನೆ  ಜಿಲ್ಲಾ ಕಾರ್ಯದರ್ಶಿ ರಾಜೀಶ್ ವೆಳ್ಳಾಟ್ ಧರಣಿ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಪಿ.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿ ಚೆನ್ನಿಕ್ಕರ, ರಂಜಿನಿ ಕಾಡಗಂ, ಪ್ರವೀಣ್ ಪಾಡಿ ಮತ್ತು ಇಮ್ಯಾನುವೆಲ್  ಉಪಸ್ಥೀತರಿದ್ದರು. ಜಿಲ್ಲಾ ಕಾರ್ಯದರ್ಶಿ ಸುಭಾಷ್ ಪಾಡಿ ಸ್ವಾಗತಿಸಿದರು. ತಾಐಲಂಗಾಡಿಯಿಂದ ಕಾಸರಗೊಡು ರೈಲ್ವೆ ನಿಲ್ದಾಣ ವರೆಗೆ ಪ್ರತಿಭಟನ ಮೆರವಣಿಗೆ ಆಯೋಜಿಸಲಾಗಿತ್ತು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries