HEALTH TIPS

ಮೇಯರ್ ಹುದ್ದೆ ಭರವಸೆ ನೀಡಿ ಭ್ರಮನಿರಸಗೊಳಿಸಿದ ಬಿಜೆಪಿ: ನಾಯಕತ್ವದ ವಿರುದ್ದ ಬೇಸರ: ಆರ್. ಶ್ರೀಲೇಖಾ ಮನವೊಲಿಸಲು ಪ್ರಯತ್ನಿಸಿದ ಪಕ್ಷ

ತಿರುವನಂತಪುರಂ: ಮೇಯರ್ ಚುನಾವಣೆಯಲ್ಲಿ ತೀವ್ರ ಬೇಸರಗೊಂಡು ಮುನಿಸಿರುವ ಶ್ರೀಲೇಖಾ ಅವರನ್ನು ಓಲೈಸಲು ಬಿಜೆಪಿ ಮುಂದಾಗಿದೆ.

ಪಕ್ಷದ ನಾಯಕತ್ವದ ನಿರ್ದೇಶನದಂತೆ, ಮೇಯರ್ ವಿ.ವಿ. ರಾಜೇಶ್ ಮತ್ತು ಉಪಮೇಯರ್ ಆಶಾ ನಾಥ್ ಅವರು ಶ್ರೀಲೇಖಾ ಅವರ ಮನೆಗೆ ಭೇಟಿ ನಿನ್ನೆ ಸಂಜೆ ನೀಡಿ ಚರ್ಚೆ ನಡೆಸಿದರು, 


ಮೇಯರ್ ಪ್ರಮಾಣ ವಚನ ಸ್ವೀಕಾರ ಸಮಾರಂಭ ಪೂರ್ಣಗೊಳ್ಳುವ ಮೊದಲು ಶ್ರೀಲೇಖಾ ಅವರು ಹಿಂದಿರುಗಿದ್ದು ವಿವಾದಕ್ಕೆ ಕಾರಣವಾಗಿತ್ತು. ಪ್ರಮುಖ ನಾಯಕರನ್ನು ಭೇಟಿ ಮಾಡುವ ಭಾಗವಾಗಿ ಈ ಭೇಟಿ ನಡೆದಿದೆ ಎಂದು ಮೇಯರ್ ಹೇಳಿದರು. ಆದಾಗ್ಯೂ, ಮೇಯರ್ ಹುದ್ದೆ ಲಭಿಸದ್ದಕ್ಕಾಗಿ ಶ್ರೀಲೇಖಾ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.

ಅವರು ಶಾಸ್ತಾಮಂಗಲಂನಲ್ಲಿ ಸ್ಪರ್ಧೆಗೆ ಪ್ರವೇಶಿಸಿದಾಗ, ಕೆಲವು ರಾಜ್ಯ ನಾಯಕರೇ ಅವರಿಗೆ ಮೇಯರ್ ಹುದ್ದೆಯ ಭರವಸೆ ನೀಡಿದ್ದರು. ಆದರೆ, ವಿ.ವಿ. ರಾಜೇಶ್ ಅವರಿಗೆ ಮೇಯರ್ ಹುದ್ದೆ ನೀಡುವ ನಿರ್ಧಾರ ತೆಗೆದುಕೊಂಡ ನಂತರ ಶ್ರೀಲೇಖಾ ಭ್ರಮನಿರಸಗೊಂಡರು ಎಂದು ತಿಳಿದುಬಂದಿದೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries