HEALTH TIPS

ಪಠ್ಯದಲ್ಲಿ ನ್ಯಾಯಾಂಗ ಭ್ರಷ್ಟಾಚಾರ ಅಧ್ಯಾಯ: ನಿಷೇಧ ಪರಾಮರ್ಶೆಗೆ ಶಿಕ್ಷಣ ತಜ್ಞರ ಮನವಿ

ನವದೆಹಲಿ: ವಿಷಯತಜ್ಞರಾಗಿ ಎನ್‌ಸಿಇಆರ್‌ಟಿ ನೇಮಕ ಮಾಡಿಕೊಂಡಿದ್ದ ಮೂವರು ಶಿಕ್ಷಣ ತಜ್ಞರನ್ನು "ನ್ಯಾಯಾಂಗವನ್ನು ಋಣಾತ್ಮಕವಾಗಿ ಬಿಂಬಿಸಿದ್ದಕ್ಕಾಗಿ" ನಿಷೇಧಿಸಿರುವ ಕ್ರಮವನ್ನು ಪರಾಮರ್ಶಿಸುವಂತೆ ಕೋರಿ ಸುಪ್ರೀಂಕೋರ್ಟ್ಗೆ ಈ ಶಿಕ್ಷಣ ತಜ್ಞರು ಮನವಿ ಸಲ್ಲಿಸಿದ್ದಾರೆ.

ಎಂಟನೇ ತರಗತಿಯ ಪಠ್ಯದಲ್ಲಿ ನ್ಯಾಯಾಂಗ ಕ್ಷೇತ್ರದ ಭ್ರಷ್ಟಾಚಾರ ಕುರಿತ ಅಧ್ಯಾಯವನ್ನು ಸೇರಿಸಿದ್ದಕ್ಕಾಗಿ ಪ್ರೊ.ಮೈಕೆಲ್ ಡ್ಯಾನಿನೊ, ಸುಪರ್ಣಾ ದಿವಾಕರ್ ಮತ್ತು ಅಲೋಕ್ ಪ್ರಸನ್ನ ಕುಮಾರ್ ಅವರನ್ನು ಮುಂದೆ ಯಾವುದೇ ಪಠ್ಯಪುಸ್ತಕ ರಚನಾ ಪ್ರಕ್ರಿಯೆಗೆ ತೊಡಗಿಸಿಕೊಳ್ಳದಂತೆ ಸುಪ್ರೀಂಕೋರ್ಟ್ ನಿಷೇಧ ಹೇರಿತ್ತು. ಈ ನಿಷೇಧ ಕ್ರಮವನ್ನು ಪರಾಮರ್ಶಿಸುವಂತೆ ಕೋರಿ ಮೂವರು ಶಿಕ್ಷಣ ತಜ್ಞರು ಸೋಮವಾರ ಪರಾಮರ್ಶನಾ ಅರ್ಜಿ ಸಲ್ಲಿಸಿದ್ದಾರೆ.

"ಆರು ಮತ್ತು ಏಳನೇ ತರಗತಿಯ ಪಠ್ಯದಲ್ಲಿ ಶಾಸಕಾಂಗ, ಚುನಾವಣಾ ಆಯೋಗ ಮತ್ತು ಕಾರ್ಯಾಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಉಲ್ಲೇಖವಿದೆ. ಅನುಸರಿಸಲಾಗುತ್ತಿರುವ ವಿಧಿವಿಧಾನಗಳನ್ನು ಬಿಂಬಿಸುವುದು ನಮ್ಮ ಧ್ಯೇಯ. ಇವರು ಸಾಕಷ್ಟು ವಿಶ್ವಾಸಾರ್ಹತೆ ಇರುವ ಶಿಕ್ಷಣ ತಜ್ಞರು" ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ಅರವಿಂದ್ ದಾತಾರ್, ಗೋಪಾಲ್ ಶಂಕರನಾರಾಯಣನ್ ಮತ್ತು ಸಾಯಿ ದೀಪಕ್ ಅವರು, ಈ ಮೂವರು ಶಿಕ್ಷಣ ತಜ್ಞರನ್ನು ಕಪ್ಪುಪಟ್ಟಿಗೆ ಸೇರಿಸಿರುವುದರಿಂದ ಗಂಭೀರ ಪರಿಣಾಮಗಳು ಎದುರಾಗಲಿವೆ ಎಂದು ವಾದಿಸಿದರು. ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ ಮಲ್ಯ ಬಗ್ಚಿಯವರನ್ನೊಳಗೊಂಡ ಪೀಠ ತುರ್ತಾಗಿ ಅರ್ಜಿಯ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries