HEALTH TIPS

ಕೃಷಿಯಲ್ಲಿ ಎ.ಐ ಬಳಕೆಗೆ ನಿತಿನ್‌ ಗಡ್ಕರಿ ಸಲಹೆ

 ನಾಗ್ಪುರ: ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಬಳಕೆ ಮಾಡುವುದರಿಂದ ನೀರು ಮತ್ತು ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಬಹುದು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಶನಿವಾರ ಸಲಹೆ ನೀಡಿದರು. 


'ಎ.ಐ ಬಳಕೆಯಿಂದ ಬೆಳೆಗಳ ಮೇಲೆ ಪರಿಣಾಮ ಬೀರುವ ರೋಗಗಳ ಕುರಿತು ಮೊದಲೇ ತಿಳಿಯಬಹುದು.

ಕೃಷಿಯಲ್ಲಿ ಎ.ಐ ಮತ್ತು ಡ್ರೋನ್‌ ಬಳಕೆಯ ಕುರಿತು ರೈತರಿಗೆ ತರಬೇತಿ ನೀಡುವ ಅವಶ್ಯಕತೆಯಿದೆ' ಎಂದು ಗಡ್ಕರಿ ಹೇಳಿದರು.

'ವಿದರ್ಭ ಪ್ರದೇಶದ ಸಾವಿರಾರು ಕಬ್ಬು ಮತ್ತು ಕಿತ್ತಳೆ ಬೆಳೆಗಾರರು ಎ.ಐ ಬಳಸಿಕೊಳ್ಳಲು ಅನುಕೂಲವಾಗುವಂತೆ ಆಗ್ರೋವಿಷನ್ ಫೌಂಡೇಶನ್‌ ಕೆಲಸ ಮಾಡುತ್ತಿದೆ' ಎಂದರು.

ನಾಗ್ಪುರದಲ್ಲಿ ಕೃಷಿ ವಿಕಾಸ್‌ ಪ್ರತಿಷ್ಠಾನ ಸ್ಥಾಪಿಸಿದ ಡಾ. ಸಿಡಿ.ಮಾಯೀ ಸ್ಮರಣಾರ್ಥ ಪ್ರಶಸ್ತಿಯನ್ನು ಬಾರಾಮತಿಯ ಕೃಷಿ ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ರಾಜೇಂದ್ರ ಪವಾರ್‌ ಅವರಿಗೆ ಪ್ರದಾನ ಮಾಡಿದ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ಕೃಷಿ ಮತ್ತು ಪಶುಸಂಗೋಪನೆಯಲ್ಲಿ ತಂತ್ರಜ್ಞಾನ ವನ್ನು ಬಳಸಿಕೊಂಡಿದ್ದಕ್ಕಾಗಿ ಕೃಷಿ ಅಭಿವೃದ್ಧಿ ಟ್ರಸ್ಟ್‌ ಮತ್ತು ರಾಜೇಂದ್ರ ಪವಾರ್‌ ಅವರನ್ನು ಶ್ಲಾಘಿಸಿದರು.  








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries