HEALTH TIPS

ವರ್ಕಾಡಿ ಸೆಕ್ಷನ್ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಲು ಮುಸ್ಲಿಂ ಲೀಗ್ ಪಂ. ಸಮಿತಿ ಸಭೆ ಒತ್ತಾಯ

ಮಂಜೇಶ್ವರ: ವರ್ಕಾಡಿ ವಿದ್ಯುತ್ ಸೆಕ್ಷನ್ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ವರ್ಕಾಡಿ ಪಂಚಾಯತಿ ಸಮಿತಿ ಸಭೆ ಒತ್ತಾಯಿಸಿದೆ. ವಿದ್ಯುತ್ ಇಲಾಖೆಯ ಸಿಬ್ಬಂದಿಗಳಲ್ಲಿ ಕೆಲವರು ತೋರುವ ನಿರ್ಲಕ್ಷ್ಯ ಕೂಡಲೇ ಕೊನೆಗೊಳಿಸಬೇಕು, ಇಲ್ಲದಿದ್ದರೆ ಸಾರ್ವಜನಿಕರನ್ನು ಸಂಘಟಿಸಿ ಹೋರಾಟ ನಡೆಸಲಾಗುವುದು ಎಂದು ಸಭೆ ಎಚ್ಚರಿಕೆ ನೀಡಿದೆ. 


ಕೆಲವು ಪ್ರದೇಶಗಳಲ್ಲಿ ಹಲವು ದಿನಗಳಿಂದ ವಿದ್ಯುತ್ ಇಲ್ಲದಿದ್ದರೂ, ಗ್ರಾಹಕರಿಗೆ ಸಮರ್ಪಕ ಮಾಹಿತಿ ನೀಡದೆ ಮೋಸಗೊಳಿಸಲಾಗುತ್ತಿದೆ ಎಂದು ಸಭೆ ಆರೋಪಿಸಿತು. ಈ ಕುರಿತು ರಾಜ್ಯ ವಿದ್ಯುತ್ ಸಚಿವ, ಶಾಸಕರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ವರ್ಕಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ರಾಜ್ಯ ಸಾರಿಗೆ ಇಲಾಖೆಯ ಬಸ್ ಸಂಚಾರ ಆರಂಭಿಸುವಂತೆ ಸಾರಿಗೆ ಸಚಿವರಿಗೆ ಶಾಸಕರ ಮುಖಾಂತರ ಮನವಿ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಕೇರಳ ಪ್ರವಾಸಿ ಲೀಗ್ ಸದಸ್ಯತ್ವ ಅಭಿಯಾನಕ್ಕೆ ಪ್ರವಾಸಿ ಲೀಗ್ ಪದಾಧಿಕಾರಿಗಳಾದ ರೆÀುುsಡ್.ಎ ಮೊಗ್ರಾಲ್, ಎ.ಆರ್. ಕಂಡತ್ತಾಡ್ ಹಾಗೂ ಬದ್ರುದ್ದೀನ್ ಕಂಡತ್ತಿಲ್ ಚಾಲನೆ ನೀಡಿದರು.

ಕೆ. ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಬಿ.ಎ. ಸ್ವಾಗತಿಸಿದರು. ಪಿ.ಬಿ. ಅಬೂಬಕ್ಕರ್ ಪಾತೂರು, ಮೂಸ ಹಾಜಿ ತೋಕೆ, ಎ.ಕೆ. ಖಾಲಿದ್ ದುರ್ಗಿಪಳ್ಳ, ಹಾಜಿ ಉಮರಬ್ಬ ಆನೆಕಲ್ಲು, ಮೂಸ ಕೆದುಂಬಾಡಿ, ವಿ.ಎಸ್. ಮೊಹಮ್ಮದ್ ಧರ್ಮನಗರ, ಸಿದ್ದೀಕ್ ಬದಿಯಾರ್, ಫಾತಿಮತ್ ನಸೀಮಾ, ನಾರಾಯಣ, ಕುಂಞÁಮಿನ, ಖಲೀಲ್ ಸಿ.ಎಂ. ನಗರ, ಇಬ್ರಾಹಿಂ ಹಾಜಿ ಕೊಮ್ಮಂಗುದಿ, ಬದ್ರುದ್ದೀನ್ ಪಾವೂರು, ರಜಾಕ್ ಕೆದುಂಬಾಡಿ, ಮುತ್ತಲಿಬ್ ಕೆದುಂಬಾಡಿ, ಲತೀಫ್ ತೋಕೆ, ಅಬ್ಬು ಕಲ್ಮಿಂಜ, ಹಾರಿಸ್ ಬದ್ರಿ ಕಜೆ, ಎನ್.ಎಂ. ಮೊಯ್ದೀನ್ ಹಾಜಿ ಪಾತೂರು, ಪಿ.ಬಿ.ಎ. ಖರೀಮ್, ಪಿ.ಪಿ ಅಬ್ದುಲ್‍ಕಾದರ್ ಮುಸ್ಲಿಯಾರ್, ಮೊಯ್ದೀನ್ ನಂದರಬೈಲು, ಕೆ.ಎಂ. ಅಶ್ರಫ್ ನಡಿಬೈಲ್, ಅಹ್ಮದ್ ಮೋನು ಓಡಂಗಳ ಹಾಗೂ ಹಾರೂನ್ ರಶೀದ್ ಧರ್ಮನಗರ, ಲತೀಫ್ ಪೆÇಯ್ಯೆ ಸೇರಿದಂತೆ ಹಲವರು ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries