HEALTH TIPS

ಕಲ್ಲಾಡಿ ಭೂಕುಸಿತ: ದುರಂತದ ಸ್ಥಳವನ್ನು ಪರಿಶೀಲಿಸಿದ ತಜ್ಞರ ತಂಡ

ಮೇಪ್ಪಾಡಿ: ವಯನಾಡಿನ ಕಲ್ಲಾಡಿ ಭೂಕುಸಿತ ದುರಂತದ ಸ್ಥಳವನ್ನು ತಜ್ಞರ ತಂಡ ಪರಿಶೀಲಿಸಿದೆ.

ನಿರ್ಮಾಣ ಕಾರ್ಯದ ಭಾಗವಾಗಿ ಯೋಜನಾ ಪ್ರದೇಶದಲ್ಲಿ ರಾಶಿ ಬಿದ್ದಿದ್ದ ಮಣ್ಣನ್ನು ತೆಗೆಯುವ ಬಗ್ಗೆ ಅಧ್ಯಯನ ಮಾಡಲು ಸರ್ಕಾರ ನೇಮಿಸಿದ ಮೂವರು ಸದಸ್ಯರ ಸಮಿತಿಯು ಪರಿಶೀಲನೆ ನಡೆಸಿದೆ. 


ತಜ್ಞರ ತಂಡದ ವರದಿಯ ಆಧಾರದ ಮೇಲೆ ರಾಶಿ ಬಿದ್ದಿರುವ ಮಣ್ಣನ್ನು ಬೇರೆ ಸ್ಥಳಕ್ಕೆ ಸುರಕ್ಷಿತವಾಗಿ ಸಾಗಿಸುವುದು ಹೇಗೆ ಎಂಬುದರ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು.ವಯನಾಡು ಸುರಂಗ ನಿರ್ಮಾಣ ಕಾರ್ಯದ ಭಾಗವಾಗಿ ಯೋಜನಾ ಪ್ರದೇಶದಲ್ಲಿ ಬೆಟ್ಟದಂತೆ ಮಣ್ಣು ರಾಶಿ ಬಿದ್ದಿದೆ.

ಭೂಕುಸಿತ ದುರಂತಕ್ಕೂ ಮುನ್ನ ಅಪಾಯಕಾರಿಯಾಗಿ ರಾಶಿ ಬಿದ್ದಿದ್ದ ಮಣ್ಣನ್ನು ಆದಷ್ಟು ಬೇಗ ತೆಗೆದುಹಾಕುವಂತೆ ಜಿಲ್ಲಾಡಳಿತ ಆದಾಗಲೇ ಸೂಚನೆ ನೀಡಿತ್ತು.

ಅವಘಡದ ನಂತರ ಮಣ್ಣನ್ನು ಸುರಕ್ಷಿತವಾಗಿ ತೆಗೆದುಹಾಕಲು ಸರ್ಕಾರ ಮೂವರು ಸದಸ್ಯರ ಸಮಿತಿಯನ್ನು ನೇಮಿಸಿತ್ತು. ಮೂವರು ಸದಸ್ಯರ ಸಮಿತಿಯಲ್ಲಿ ಕೋಝಿಕ್ಕೋಡ್‍ನ ಎನ್‍ಐಟಿಯ ಪ್ರಾಧ್ಯಾಪಕ ಡಾ. ಸಂತೋಷ್ ಜಿ ತಂಬಿ ಮತ್ತು ಎನ್‍ಸಿಇಎಸ್‍ಎಸ್ ಪ್ರತಿನಿಧಿ ಕೆ ಶ್ರೀಲೇಶ್ ಆಗಮಿಸಿದರು. ಪರಿಸರ ನಿರ್ದೇಶನಾಲಯದ ಎಂಜಿನಿಯರ್ ಡಾ. ಜೂಡ್ ತಂಡದಲ್ಲಿ ಇರಲಿಲ್ಲ. ಕೊಂಕಣ ರೈಲ್ವೆ ನೇಮಿಸಿದ ತಜ್ಞರ ತಂಡವೂ ಸ್ಥಳವನ್ನು ಪರಿಶೀಲಿಸಿತು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries