HEALTH TIPS

ಪೋಲೀಸ್ ಠಾಣೆಯಲ್ಲಿ ಯುವಕನ ಪರಾಕ್ರಮ: ಸಿ.ಐ. ತಲೆಗೆ ಥಳಿತ

ತಿರುವನಂತಪುರಂ: ಪೋಲೀಸ್ ಠಾಣೆಯಲ್ಲಿ ಯುವಕನ ಪರಾಕ್ರಮವೊಂದು ವರದಿಯಾಗಿದೆ. ಆರ್ಯನಾಡಿನ ಕುಲಪ್ಪಡ ಮೂಲದ ಯದು ಕೃಷ್ಣನ್ ಠಾಣೆಗೆ ನುಗ್ಗಿದ. ಮದ್ಯದ ಬಾಟಲಿಯೊಂದಿಗೆ ಬಂದ ಯದು ಪೋಲೀಸರೊಂದಿಗೆ ಅನುಚಿತವಾಗಿ ವರ್ತಿಸಿ, ಬಾಟಲಿಯನ್ನು ಠಾಣೆಗೆ ಎಸೆದು, ಮೇಜಿನ ಮೇಲಿದ್ದ ದೂರು ಪತ್ರಗಳನ್ನು ಹರಿದು ಹಾಕಿದ್ದಾನೆ. 


ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ತಿಳಿದ ನಂತರ ಸರ್ಕಲ್ ಇನ್ಸ್‍ಪೆಕ್ಟರ್ ಪೋಲೀಸ್ ಠಾಣೆಗೆ ತಲುಪಿದರು. ಇದರೊಂದಿಗೆ, ಯದು ಕೃಷ್ಣನ್ ಹತ್ತಿರದ ಆಸ್ಪತ್ರೆ ಕಟ್ಟಡಕ್ಕೆ ಓಡಿಹೋದ. ಬಳಿಕ ಮತ್ತೆ ಆಗಮಿಸಿದ ಯದು ಸಿಐ ತಲೆಗೆ ಕಬ್ಬಿಣದ ಕುರ್ಚಿಯಿಂದ ಥಳಿಸಿದ 

ತಲೆಗೆ ಗಂಭೀರ ಗಾಯಗಳಾದ ಸರ್ಕಲ್ ಇನ್ಸ್‍ಪೆಕ್ಟರ್ ಅವರನ್ನು ಕಾಟ್ಟಾಕಡದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕ್ರಮಣಶೀಲತೆಯನ್ನು ಪ್ರದರ್ಶಿಸಿದ ಯದು ಕೃಷ್ಣನ್ ನನ್ನು ಪೋಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಯದು ಕೃಷ್ಣನ್ ಸಣ್ಣ ಮಾನಸಿಕ ಸವಾಲನ್ನು ಎದುರಿಸುತ್ತಿರುವ ವ್ಯಕ್ತಿ ಎಂದು ವರದಿಯಾಗಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries