ಕಾಸರಗೋಡು: ಮಾರಕ ಎಂಡಿಎಂಎ ಸಾಗಾಟ ಪ್ರಕರಣದ ಅಪರಾಧಿ ಮಲಪ್ಪುರಂ ಜಿಲ್ಲೆಯ ವೆಂಗರ ಕಣ್ಣಮಂಗಲ ನಿವಾಸಿ ಪಿ.ಎ. ನೌಶಾದ್ ಅಲಿ (44) ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶ ರಾಮು ರಮೇಶ್ಚಂದ್ರ ಭಾನು ಅವರು ಒಂದು ವರ್ಷ ಕಠಿಣ ಸಜೆ ಹಾಗೂ 20ಸಾವಿರ ರೂ. ದಮಡ ವಿಧಿಸಿ ತೀರ್ಪು ನೀಡಿದ್ದಾರೆ. ದದಂಡ ಪಾವತಿಸದಿದ್ದಲ್ಲಿ ಅಪರಾಧಿ ಎರಡು ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
2022 ಆಗಸ್ಟ್ 5ರಂದು ಕುಂಬಳೆ ಕಂಟಂಗೇರಡ್ಕ ಐಎಚ್ಆರ್ಡಿ ಕಾಲೇಜು ಬಳಿ ಅಂದು ಕುಂಬಳೆ ಪೆÇಲೀಸ್ ಠಾಣೆಯ ಎಸ್ಐ ಆಗಿದ್ದ ವಿ.ಕೆ. ಅನೀಶ್ರ ನೇತೃತ್ವದ ಪೆÇಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಎಂಡಿಎಂಎ ಸಾಗಿಸುತ್ತಿದ್ದ ನೌಶಾದ್ ಅಲಿಯನ್ನು ಬಂಧಿಸಿ ಈತನಿಂದ 11.65ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು.

