HEALTH TIPS

ಓಣಂ ಹಬ್ಬ: ಮಾದಕ ವಸ್ತು ಮುಕ್ತಗೊಳಿಸಲು ತನಿಖೆ ಚುರುರುಗೊಳಿಸಿದ ಪೋಲೀಸರು ಮತ್ತು ಅಬಕಾರಿ ಇಲಾಖೆ

ತಿರುವನಂತಪುರಂ: ಓಣಂ ಆಚರಣೆಯ ನೆಪದಲ್ಲಿ ಮಾದಕ ವಸ್ತು ಮಾರಾಟ ಮತ್ತು ಬಳಕೆಯನ್ನು ತಡೆಯಲು ಪೋಲೀಸರು ಮತ್ತು ಅಬಕಾರಿ ಇಲಾಖೆ ಕ್ರಮಗಳನ್ನು ಬಿಗಿಗೊಳಿಸಿವೆ. 


ಹಬ್ಬದ ಸಮಯದಲ್ಲಿ ಪ್ರವಾಸಿ ತಾಣಗಳಲ್ಲಿ ಮಾದಕ ವಸ್ತು ಮಾಫಿಯಾ ಹಿಡಿತ ಸಾಧಿಸುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ನೀಡಿದ ಎಚ್ಚರಿಕೆಯ ನಂತರ ಕಟ್ಟುನಿಟ್ಟಿನ ನಿಬರ್ಂಧಗಳನ್ನು ವಿಧಿಸಲಾಗಿದೆ. 'ತೂಫಾನ್' ಮತ್ತು ಆಪರೇಷನ್ ತಂಡರ್ ತಪಾಸಣೆಗಳು ಮಾದಕ ವಸ್ತು ಮಾಫಿಯಾಗಳು ಈ ಪ್ರದೇಶಕ್ಕೆ ಪ್ರವೇಶಿಸುವುದನ್ನು ತಡೆಗಟ್ಟಿದ್ದರೂ, ಓಣಂ ಉದ್ದೇಶಕ್ಕಾಗಿ ಮತ್ತೆ ಮಾದಕ ವಸ್ತು ತರಲು ಪ್ರಯತ್ನಿಸುತ್ತಿರುವ ಗುಂಪುಗಳು ಸಕ್ರಿಯವಾಗಿರುವುದು ಕಂಡುಬಂದಿದೆ.

ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ಗುಪ್ತಚರ ಇಲಾಖೆ ಸಹಾಯದಿಂದ ತಪಾಸಣೆ ನಡೆಸಲಾಗುವುದು. ಯಾವುದೇ ಅನುಮಾನಾಸ್ಪದ ಚಲನವಲನಗಳನ್ನು ತಕ್ಷಣ ವರದಿ ಮಾಡಲು ದೊಡ್ಡ ರೆಸಾರ್ಟ್‍ಗಳು ಮತ್ತು ಹೌಸ್‍ಬೋಟ್‍ಗಳ ಮಾಲೀಕರಿಗೆ ಸೂಚಿಸಲಾಗಿದೆ.

ಹಿಂದೆ ಓಣಂ ಸಮಯದಲ್ಲಿ ನಕಲಿ ಗಾಂಜಾ ಪ್ರಮುಖ ಬೆದರಿಕೆಯಾಗಿತ್ತು, ಆದರೆ ಈಗ ಹೈಬ್ರಿಡ್ ಗಾಂಜಾ ಮತ್ತು ಒಆಒಂ ಸೇರಿದಂತೆ ರಾಸಾಯನಿಕ ಔಷಧಗಳು ಮಾರುಕಟ್ಟೆಯಲ್ಲಿ ಸಕ್ರಿಯವಾಗಿವೆ. . ಆಪರೇಷನ್ ತೂಫಾನ್ ನ ಭಾಗವಾಗಿ, ಸುಮಾರು ಹತ್ತು ಸಾವಿರ ಜನರನ್ನು ಬಂಧಿಸಲಾಗಿದೆ.

ರಾಜ್ಯಕ್ಕೆ ಕಿಲೋಗ್ರಾಂಗಳಷ್ಟು ಗಾಂಜಾವನ್ನು ಕಳ್ಳಸಾಗಣೆ ಮಾಡುವ ವಲಸೆ ಕಾರ್ಮಿಕರ ವಿಶೇಷ ಗುಂಪುಗಳೊಂದಿಗೆ ತನಿಖೆ ಪ್ರಗತಿಯಲ್ಲಿದೆ. ಈ ಹಿಂದೆ ಬಂಧಿಸಲ್ಪಟ್ಟವರ ಸಹಚರರು ಮತ್ತು ನಿಯಮಿತ ಅಪರಾಧಿಗಳು ಪ್ರಸ್ತುತ ಪೆÇಲೀಸರ ಕಣ್ಗಾವಲಿನಲ್ಲಿದ್ದಾರೆ. ಸಾರ್ವಜನಿಕರು ಮತ್ತು ಪ್ರವಾಸೋದ್ಯಮ ಉದ್ಯಮಿಗಳು ಯಾವುದೇ ಮಾದಕವಸ್ತು ವ್ಯವಹಾರವನ್ನು ಗಮನಿಸಿದರೆ, ಅವರು ತಕ್ಷಣವೇ ಅಬಕಾರಿ ಮತ್ತು ಪೋಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು.










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries