ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಮಹಿಳಾ ಸಮಿತಿ ಬದಿಯಡ್ಕ ಆಶ್ರಯದಲ್ಲಿ ವ್ಯಾಪಾರಿ ದಿನ ಕನ್ನೆಪ್ಪಾಡಿಯ ಆಶ್ರಯ ಆಶ್ರಮದಲ್ಲಿ ಆಚರಿಸಲಾಯಿತು.
ಮಹಿಳಾ ಘಟಕ ಅಧ್ಯಕ್ಷೆ ಜಯಂತಿ ಚೆಟ್ಟಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಅನಿತಾ, ಸಸ್ಯರಾದ ವೃಂದಾ ಪ್ರಭು, ಕವಿತಾ ರತ್ನಾಕರ್, ಜಯಲಕ್ಷ್ಮಿ, ಪುಷ್ಪ, ವಿನುತ, ಸುಮತಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೃಪಾ ಯತೀಶ್ ಸ್ವಾಗತಿಸಿ, ಕೋಶಾಧಿಕಾರಿ ಪೂರ್ಣಿಮಾ ವಂದಿಸಿದರು. ಇದೇ ಸಂದರ್ಭದಲ್ಲಿ ವ್ಯಾಪಾರಿ ಮಹಿಳಾ ಘಟಕದ ವತಿಯಿಂದ ನಿತ್ಯೋಪಯೋಗಿ ಸಾಮಗ್ರಿಗಳನ್ನು ಆಶ್ರಮಕ್ಕೆ ವಿತರಿಸಲಾಯಿತು. ಅಲ್ಲಿಯ ನಿವಾಸಿಗಳ ಜೊತೆ ಕೇಕ್ ಕತ್ತರಿಸಿ ವ್ಯಾಪಾರಿ ದಿನ ಆಚರಿಸಲಾಯಿತು.

.jpg)
.jpg)
