ಇಡುಕ್ಕಿ: ಸತತ 18 ವರ್ಷ ಕೇರಳಂ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕನಾಗಿ ಕೆಲಸ ಮಾಡಿದ್ದ ವ್ಯಕ್ತಿಯೊಬ್ಬರು ವೃತ್ತಿಯ ಕೊನೆಯ ದಿನ, ತಾವು ಚಲಾಯಿಸಿದ್ದ ಬಸ್ಗೆ ಮುತ್ತಿಟ್ಟು ಭಾವುಕ ವಿದಾಯ ಹೇಳಿದ್ದಾರೆ.
ಪೌಲ್ ಕುರಿಯನ್, ಕಳೆದ 18 ವರ್ಷಗಳಿಂದ ಇಡುಕ್ಕಿ- ಕುಮಿಲೆ ಹಾದಿಯಲ್ಲಿ ಬಸ್ ಚಲಾಯಿಸುತ್ತಿದ್ದರು.
ಕೆಲಸದ ಕೊನೆಯ ದಿನದಂದು ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ನೋಡಿ ಕಣ್ಣೀರಾಗಿದ್ದಾರೆ.
ಬಸ್ ಎದುರಿನ ಭಾಗಕ್ಕೆ ಒರಗಿ ನಿಂತು, ಪ್ರೀತಿಯಿಂದ ಮುತ್ತಿಟ್ಟಿದ್ದಾರೆ. ಚಾಲಕನ ಈ ಭಾವುಕ ಕ್ಷಣವನ್ನು ಸಹೋದ್ಯೋಗಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. ಅದೇ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಅ.31ಕ್ಕೆ ಪೌಲ್ ಅಧಿಕೃತವಾಗಿ ನಿವೃತ್ತರಾಗುತ್ತಿದ್ದಾರೆ. ಆದರೆ, ಮುಂಚಿತವಾಗಿ ರಜೆ ಪಡೆದುಕೊಂಡ ಕಾರಣ ಕಳೆದ ಮಂಗಳವಾರ ಅವರ ಕೆಲಸದ ಕೊನೆಯ ದಿನವಾಗಿತ್ತು.
ಪೌಲ್ ಅವರ ಪ್ರೀತಿಯ ವಿದಾಯದ ಪರಿ, ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರ ಗಮನವನ್ನೂ ಸೆಳೆದಿದೆ. ಸತೀಶನ್ ಅವರು ವಿಡಿಯೊವನ್ನು ಹಂಚಿಕೊಂಡು, 'ಪೌಲ್ ಕುರಿಯನ್ ಅವರಂತಹ ಸಾವಿರಾರು ಕೆಎಸ್ಆರ್ಟಿಸಿ (KSRTC) ನೌಕರರ ಬದ್ಧತೆ ಮತ್ತು ಹೆಮ್ಮೆ ಕೇರಳಂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿ ನಿಂತಿದೆ. ರಾಜ್ಯದ ಜೀವನಾಡಿಯಾಗಿರುವ ಕೆಎಸ್ಆರ್ಟಿಸಿಯನ್ನು ರಕ್ಷಿಸಿ ಬಲಪಡಿಸುವ ಜೊತೆಗೆ, ಅದನ್ನು ಆಧುನೀಕರಿಸಲು ಸರ್ಕಾರ ಬದ್ಧವಾಗಿದೆ' ಎಂದು ಬರೆದುಕೊಂಡಿದ್ದಾರೆ.
ಅ.31ಕ್ಕೆ ಪೌಲ್ ಅಧಿಕೃತವಾಗಿ ನಿವೃತ್ತರಾಗುತ್ತಿದ್ದಾರೆ. ಆದರೆ, ಮುಂಚಿತವಾಗಿ ರಜೆ ಪಡೆದುಕೊಂಡ ಕಾರಣ ಕಳೆದ ಮಂಗಳವಾರ ಅವರ ಕೆಲಸದ ಕೊನೆಯ ದಿನವಾಗಿತ್ತು.
ಪೌಲ್ ಅವರ ಪ್ರೀತಿಯ ವಿದಾಯದ ಪರಿ, ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರ ಗಮನವನ್ನೂ ಸೆಳೆದಿದೆ. ಸತೀಶನ್ ಅವರು ವಿಡಿಯೊವನ್ನು ಹಂಚಿಕೊಂಡು, 'ಪೌಲ್ ಕುರಿಯನ್ ಅವರಂತಹ ಸಾವಿರಾರು ಕೆಎಸ್ಆರ್ಟಿಸಿ (KSRTC) ನೌಕರರ ಬದ್ಧತೆ ಮತ್ತು ಹೆಮ್ಮೆ ಕೇರಳಂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿ ನಿಂತಿದೆ. ರಾಜ್ಯದ ಜೀವನಾಡಿಯಾಗಿರುವ ಕೆಎಸ್ಆರ್ಟಿಸಿಯನ್ನು ರಕ್ಷಿಸಿ ಬಲಪಡಿಸುವ ಜೊತೆಗೆ, ಅದನ್ನು ಆಧುನೀಕರಿಸಲು ಸರ್ಕಾರ ಬದ್ಧವಾಗಿದೆ' ಎಂದು ಬರೆದುಕೊಂಡಿದ್ದಾರೆ.

