HEALTH TIPS

ಬೆಜ್ಜ ಎಂ.ನಾರಾಯಣ ಹೆಗ್ಡೆ ಚರಮ ವಾರ್ಷಿಕ ಸಂಸ್ಮರಣೆ , ಟ್ರಸ್ಟ್ ಉದ್ಘಾಟನೆ ಫೆಬ್ರವರಿ 15 ಕ್ಕೆ.

ಮಂಜೇಶ್ವರ : ತುಳುನಾಡ ಮಣ್ಣಿನಲ್ಲಿ ಪ್ರಬಲವಾದ ರೈತ ಚಳುವಳಿಯನ್ನು ಸಂಘಟಿಸುವುದರ ಮೂಲಕ ಜಮೀನ್ದಾರಿ ಪದ್ದತಿಗೆದುರಾಗಿ ಹೋರಾಡಿ ಕಮ್ಯೂನಿಸ್ಟ್ ಪಕ್ಷವನ್ನು ಕಟ್ಟಿ ಬೆಳೆಸುವುದಕ್ಕೆ ನಿಸ್ವಾರ್ಥವಾಗಿ ಶ್ರಮಿಸಿದ ಬೆಜ್ಜದ ಗುತ್ತು ಎಂ.ನಾರಾಯಣ ಹೆಗ್ಡೆಯವರ 10 ನೇ ಸಂಸ್ಮರಣಾ ವಾರ್ಷಿಕ ವಾಗೂ ಟ್ರಸ್ಟ್ ನ ಉದ್ಘಾಟನೆ ಫೆಬ್ರವರಿ 15 ಕ್ಕೆ ನಡೆಯಲಿದೆಯೆಂದು ಸಂಘಟಕ ಸಮಿತಿ ಕಾರ್ಯದರ್ಶಿ ಬಿ.ವಿ ರಾಜನ್ ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 9 ಘಂಟೆಗೆ ಅವರ ನಿವಾಸÀ ಸಮೀಪದ ಸ್ಮøತಿ ಮಂಟಪದಲ್ಲಿ ಪುಷ್ಪಾರ್ಚನೆ ನಡೆಯಲಿದೆ. ಕೇರಳ ತುಳು ಅಕಾಡೆಮಿ ಸದಸ್ಯ ರಾಮಕೃಷ್ಣ ಕಡಂಬಾರ್ ಅಧ್ಯಕ್ಷತೆಯಲ್ಲಿ ಸಿ.ಪಿ.ಐ ಪಕ್ಷದ ಹಿರಿಯ ಕಾರ್ಯಕರ್ತ ವಾಸು ಸಫಲ್ಯ ಪುಷ್ಪಾರ್ಚನೆ ನಡೆಸಲಿರುವರು. ಸಂಜೆ 4 ಕ್ಕೆ ಬೆಜ್ಜದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಎಂ.ನಾರಾಯಣ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ನ ಉದ್ಘಾಟನೆ ಹಾಗೂ ಭೂ ಮಸೂದೆಯೂ ಆ ಬಳಿಕದ ಕೇರಳವೂ ಎಂಬ ವಿಷಯದಲ್ಲಿ ಉಪನ್ಯಾಸ ಹಾಗೂ ಅಭಿಪ್ರಾಯ ಮಂಡನಾ ಕಾರ್ಯಕ್ರಮ ನಡೆಯಲಿದೆ. ಸಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ನ್ಯಾಯವಾದಿ ಗೋವಿಂದನ್ ಪಳ್ಳಿಕ್ಕಾಪಿಲ್ ಉದ್ಘಾಟಿಸುವರು. ಮಾಜಿ ಶಾಸಕ ನ್ಯಾಯವಾದಿ ಸಿ.ಎಚ್. ಕುಞ್ಞಂಬು, ಸುರೇಶ್ ಕುಮಾರ್ ಶೆಟ್ಟಿ, ಹರ್ಷಾದ್ ವರ್ಕಾಡಿ, ಎ.ಕೆ.ಎಂ ಅಶ್ರಫ್, ಬಂಗಳಂ ಕುಞÂ್ಞ ಕೃಷ್ಣನ್, ಎಂ.ಹಸೈನಾರ್, ಎಂ.ಸಂಜೀವ ಶೆಟ್ಟಿ, ಶಂಕರ ರೈ ಮಾಸ್ಟರ್, ಚಂದ್ರಶೇಖರ್ ಶೆಟ್ಟಿ ಮೊದಲಾದವರು ಮಾತನಾಡುವರು. ಕಾರ್ಯಕ್ರಮದಲ್ಲಿ ಬೆಜ್ಜದ ಹಿರಿಯ ಹಾಗೂ ವಿಶಿಷ್ಟ ರೈತ ಮೋನಪ್ಪ ಪೂಜಾರಿಯನ್ನು ಸನ್ಮಾನಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಪತ್ರಿಕಾ ಗೋಷ್ಟಿಯಲ್ಲಿ ಬಿ.ವಿ ರಾಜನ್, ಜಯರಾಮ ಬಲ್ಲಂಗುಡೇಲು, ಎಂ.ಗೋವಿಂದ ಹೆಗ್ಡೆ, ರಾಮಕೃಷ್ಣ ಕಡಂಬಾರು, ಸಂಕಬೈಲು ಸತೀಶ್ ಅಡಪ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries