HEALTH TIPS

ಭರವಸೆ ಕೇಂದ್ರಗಳಾಗುತ್ತಿರುವ ರಾಜ್ಯದ ಸರಕಾರಿ ಆಸ್ಪತ್ರೆಗಳು

ತಿರುವನಂತಪುರ: ರಾಜ್ಯದ ಸರಕಾರಿ ಆಸ್ಪತ್ರೆಗಳು ರೋಗಿಗಳ ಭರವಸೆಯ ಕೇಂದ್ರಗಳಾಗುತ್ತಿರುವುದು ಜನಸಾಮಾನ್ಯರ ಕುತೂಹಲ ಮತ್ತು ಸಂತೃಪ್ತಿಗೆ ಕಾರಣವಾಗುತ್ತಿದೆ. ಬೃಹತ್ ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣೆ ನಡೆಸಲು ಶಿಫಾರಸು ಮಾಡುವುದು ಸರಕಾರಿ ಆಸ್ಪತ್ರೆಗಳಿಗೆ ಮತ್ತು ಗಂಭೀರ ರೂಪದ ಕಾಯಿಲೆಗಳಿಗ ಔಷಧ ಖರೀದಿಗೆ ರೋಗಿಗಳು ಸರಕಾರಿ ಆಸ್ಪತ್ರೆಗಳನ್ನು ಆಶ್ರಯಿಸುತ್ತಿರುವುದೂ ಈ ನಿಟ್ಟಿನಲ್ಲಿ ಗಮನಾರ್ಹವಾಗಿವೆ. ಸರಕಾರಿ ಮೆಡಿಕಲ್ ಕಾಲೇಜುಗಳ ಸಹಿತ 40ಕ್ಕೂ ಅಧಿಕ ಆರೋಗ್ಯ ಕೇಂದ್ರಗಳನ್ನು ಅತ್ಯಾಧುನಿಕ ಚಿಕಿತ್ಸಾ ಕೇಂದ್ರಗಳಾಗಿಸುವ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ಕ್ರಮ ಆರಂಭಿಸಿದೆ. ಕಾರ್ಪರೇಟ್ ಆಸ್ಪತ್ರೆಗಳೊಂದಿಗೆ ಹಣಾಹಣಿ ನಡೆಸುವಷ್ಟು ಸರಕಾರಿ ಆಸ್ಪತ್ರೆಗಳು ಈ ಮೂಲಕ ಬದಲಾಗಲಿವೆ. ತಿರುವನಂತಪುರಂ, ಕೋಟಯಂ, ತ್ರಿಶೂರು, ಕೋಯಿಕೋಡ್ ಮೆಡಿಕಲ್ ಕಾಲೇಜುಗಳು, ಜಿಲ್ಲಾ , ತಾಲೂಕು ಆಸ್ಪತ್ರೆಗಳೂ ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಅತ್ಯಧುನಿಕ ಚಿಕಿತ್ಸಾ ಕೇಂದ್ರಗಳಾಗಿ ಮಾರ್ಪಡಲಿವೆ. ಈ ಮೂಲಕ ಹೆಚ್ಚುವರಿ ಜನತೆಗೆ ಸರಕಾರಿ ಆಸ್ಪತ್ರೆಗಳ ಸೇವೆ ಲಭಿಸಲಿದೆ ಎಂಬ ನಿರೀಕ್ಷೆ ಮೂಡಿದೆ. 2014ರ ಸಮೀಕ್ಷೆ ಪ್ರಕಾರ ಕೇರದಲ್ಲಿ ಶೇ 34 ಮಂದಿ ಮಾತ್ರ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗಳನ್ನು ಆಶ್ರಯಿಸುತ್ತಿದ್ದರು. ಎಡರಂಗ ಸರಕಾರ ಅಧಿಕಾರಕ್ಕೇರಿದ ನಂತರ ಇದು ಶೇ 40 ಆಗಿ ಹೆಚ್ಚಳಗೊಂಡಿದೆ. ಆಸ್ಪತ್ರೆಗಳ ಆಧುನೀಕರಣ ನಿಟ್ಟಿನಲ್ಲಿ 2 ಸಾವಿರ ಕೋಟಿ ರೂ.ನ ಚಟುವಟಿಕೆಗಳು ಪ್ರಗತಿಯಲ್ಲಿವೆ. ಒಟ್ಟು 4 ಸಾವಿರ ಕೊಟಿ ರೂ. ಭಂಡವಾಳ ನಿರೀಕ್ಷೆಯಿದೆ. ಈ ನಿಕ್ಷೇಪ ಮೂಲಧನ ವೆಚ್ಚಕ್ಕಾಗಿ ಬಳಸಲಾಗುವುದು. ಮುಂದಿನ ವೆಚ್ಚಗಳಿಗೆ ಬಜೆಟ್ ನಲ್ಲಿ ಘೋಷಿಸಲಾದ ಸಂಪೂರ್ಣ ಸಮಾಜ ಸುರಕ್ಷೆ ಯೋಜನೆಯ ಮೂಲಕ ಲಭಿಸುವ ಆದಾಯವನ್ನು ಬಳಸಿಕೊಳ್ಳಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಭಾರೀ ವೆಚ್ಚಕ್ಕೆ ಕಾರಣವಾಗುತ್ತಿರುವ ಪಕ್ಷವಾತ, ಕ್ಯಾನ್ಸರ್, ಹೃರೋಗ ಇತ್ಯಾದಿಗಳಿಗೆ ಅತ್ಯುತ್ತಮ ಚಿಕಿತ್ಸೆ ಒದಗಿಸುವ ಯತ್ನದಲ್ಲಿ ಸರಕಾರಿ ಮುನ್ನಡೆಯಲ್ಲಿದೆ. 2014ರಲ್ಲಿ ಶೇ 66 ಮಂದಿ ಕ್ಯಾನ್ಸರ್ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗಳನ್ನು ಆಸ್ರಯಿಸಿದ್ದಾರೆ. ಇನ್ನೂ ಸೌಲಭ್ಯಗಳನ್ನು ಹೆಚ್ಚಿಸುವ ಮೂಲಕ ಶೇ 85 ಮಂದಿ ಸರಕಾರಿ ಆಸ್ಪತ್ರೆಗಳತ್ತ ಮನಮಾಡುವ ನಿರೀಕ್ಷೆಯಿದೆ. ಕೊಚ್ಚಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರದಲ್ಲಿ 400 ಕೋಟಿ ರೂ.ವೆಚ್ಚದ ಮೊದಲಹಂತದ ಚಟುವಟಿಕೆಗಳು ಪ್ರಗತಿಯಲ್ಲಿವೆ. ಮಲಬಾರ್ ಕ್ಯಾನ್ಸರ್ ಸೆಂಟರ್ ನ್ನು ಆರ್.ಸಿ.ಎ. ಮಟ್ಟಕ್ಕೆ ಏರಿಕೆ ನಡೆಸಲು 300 ಕೋಟಿ ರೂ. ನ ಯೋಜನೆ ನಡೆಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಈ ವರ್ಷ ಕಾತ್ ಪ್ರಯೋಗಾಲಯಗಳು ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಆರಂಭಿಸಲಾಗಿದ್ದು, ಮುಂದಿನವರ್ಷ ಹೆಚ್ಚುವರಿ ಎರಡು ಪ್ರಯೋಗಾಲಯಗಳ ಆರಂಭ ನಡೆಯಲಿವೆ. ಈ ಮೂಲಕ ಇಡುಕ್ಕಿ ಜಿಲ್ಲೆ ಹೊರತುಪಡಿಸಿ ಎಲ್ಲ ಜಿಲ್ಲೆಗಳ ಆಸ್ಪತ್ರೆಗಳಲ್ಲೂ ಕಾತ್ ಪ್ರಯೋಗಾಲಯಗಳಿರುವುವು. ಮೆಡಿಕಲ್ ಕಾಲೇಜುಗಳಲ್ಲೂ, 8 ಜಿಲ್ಲಾ ಆಸ್ಪತ್ರೆಗಳಲ್ಲೂ ಪಕ್ಷವಾತ ಚಿಕಿತ್ಸೆಗೆ ಪರಿಣತ ಸೌಲಭ್ಯಗಳು ಇವೆ. ಈ ವರ್ಷದ ಕೊನೆಯ ಹಂತದಲ್ಲಿ ಎಲ್ಲಜಿಲ್ಲಾ ಆಸ್ಪತ್ರೆಗಳಲ್ಲೂ ಈ ಸೌಕರ್ಯ ಏರ್ಪಡಿಸಲಾಗುವುದು. ಎಲ್ಲ ಜಿಲ್ಲೆ, ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ ಈ ವರ್ಷ ಜಾರಿಗೆ ಬರಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries