HEALTH TIPS

ಸಮರಸ- ಕುಮಾರ ವಾಲ್ಮೀಕಿಯ ತೊರವೆ ರಾಮಾಯಣ-ಸಂಚಿಕೆ-04

ಇನ್ನ ಬರ ಸೈರಿಸಿದ ಸೈರಣೆ
ಯುನ್ನತಿಕೆಗಿದು ಮಾರ್ಗವೇ ದಿನ
ವಿನ್ನು ಸಾರೆ ದಶಾನನಂಗೆಲೆ ತಾಯೆ ಚಿತ್ತೈಸು
ಮನ್ನಿಸದಿರವಿವೇಕವನು ವಿ
ತ್ಪನ್ನತೆಗೆ ಕುಂದಹುದು ಹಬ್ಬುವು
ದಿನ್ನು ನಿಮ್ಮಭ್ಯುದಯಲತೆ ಕೇಳೆಂದಳಾ ತ್ರಿಜಟೆ ||೬೯||

ಧವಳದಂತಿಯ ಹೆಗಲಿನಲಿ ರಾ
ಘವನ ಕಂಡೆನು ಪೃಥುಳಸಿತಪುಂ
ಗವವನೇಱಿರ್ದುದನು ಕಂಡೆನು ರಾಘವಾನುಜನ
ವಿವಿಧಮುಕ್ತಾಭರಣ ಮಂಗಳ
ನಿವಸನಾಲಂಕಾರದಲಿ ನಿ
ಮ್ಮುವನು ಕಂಡೆನು ತೊಡೆಯಮೇಲಿನವಂಶವಲ್ಲಭನ ||೭೧||

ದೇವಿಯರೆ ನಿಡಪತಿಯ ಪದರಾ
ಜೀವವತಿಸುಕ್ಷೇಮ ಲಕ್ಷ್ಮಣ
ದೇವ ಬಲ್ಲಿದನಧಿಕಬಲ ಬಲಿಮುಖಕುಲಾಧಿಪನ
ಭಾವ ಕರಲೇಸೆನ್ನ ನಿಲ್ಲಿಗೆ
ಮೂವರವರಟ್ಟಿದರು ಸೀತಾ
ದೇವಿಯರ ನೀ ನೋಡಿಬಾ ಹೋಗೆಂದು ಗುಪ್ತದಲಿ ||೭೪||

ಬಂದೆನಬಬುಧಿಯ ದಾಂಟಿ ಕಂಡೆನು
ಸಂದ ಸುವ್ರತೆಯಂಘ್ರಿಕಮಲವ
ನೆಂದೆನಲು ಮೊಗನೆಗಹಿ ನೋಡಿದಳಾ ಮಹೀರುಹವ
ಹೊಂದಿಕೆಯ ಹೊಲಬಲ್ಲವೀನುಡಿ
ಯೆಂದು ಸತಿ ಮೊಗದಿರುಹಲೊಡನಿಂ
ತೆಂದನಾ ಹನುಮಂತ ಹವಣಿಸಿದುಚಿತವಚನದಲಿ ||೭೫||

ಜನನಿ ಕೇಳ್ ನಿಮ್ಮರಸನನುಪಮ
ವನರುಹಾಂಘ್ರಿಯ ಸೇವಕರಿಗೀ
ನೆನಹು ದೊಡ್ಡಿತೆ ನೀರಧಿಯನುತ್ತರಿಸಿದಂಗವನು
ಜನನಿ ಚಿತ್ತೈಸೆನುತ ವರವಾ
ಮನ ತ್ರಿವಿಕ್ರಮನಾದವೊಲು ಬೆಳೆ
ದನು ಮಹೀತಳವದುರದವೊಲಂಬರದ ತುದಿಗಾಗಿ ||೮೦||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries