HEALTH TIPS

ಸಮರಸ-ತೊರವೆ ರಾಮಾಯಣ-ಸಂಚಿಕೆ-06-ನರಹರಿ ಕವಿ ವಿರಚಿತ

ಮನದ ಪರಿಯೇನೆನ್ನ ಮೇಲಣ
ನೆನಹಿನಂತರವೇನು ಹೇಳೈ
ಹನುಮ ಕಠಿಣವೊ ಕೋಮಲವೊ ಕಾಕುತ್ಸ್ಥನಂತಸ್ಥ
ಕನಲಿಕೆಯ ಮಾತುಗಳೊ ಮಮತೆಯ
ವಿನಯವಚನವೊ ನಿನ್ನ ಕಳುಹುವ
ದಿನದಲಿದ್ದಸ್ಥಿತಿಯನೇ ಹೇಳೆಂದಳಾ ಸೀತೆ ||೯೬||

ಅರಸಿ ಕೇಳಾಧ್ಯಾತವಿದ್ಯಾ
ಚರಿತರಿನಕುಲದವರು ರಾಮನ
ಪರಿಯವರ ಪರಿಯಲ್ಲ ಚಿಂತನೆ ದೇವಿಯರ ಮೇಲೆ
ವರಜಪಾನುಷ್ಠಾನವಿಹಿತೋ
ತ್ಕರಸಮಾಧಿಧ್ಯಾನದಲಿ ಸಂ
ಚರಣ ಜಾಗ್ರತ್ಸ್ವಪ್ನದಲಿ ಬೇಱಿಲ್ಲ ನೆನಹೆಂದ ||೯೭||

ಅಳಲದಿರಿ ನೀವಿನ್ನು ತಪ್ಪಿದ
ಕೆಲಸಕೇನಂತಿರಲಿ ಸತಿ ಕೇ
ಳೊಲುವ ನಿಮ್ಮಡಿಯರಸನನು ತಿಂಗಳಿಗೆ ತಾರದಿರೆ
ಬಳಿಕ ತಾ ಡಿಂಗರಿಗನೇ ಜಂ
ಗಳದ ಜಾಡ್ಯವ ಜಾರಬಿಡಿ ಮಂ
ಗಳೆಯರಾಗಿ ಮನೋರಥಕೆ ನೀವೆಂದನಾ ಹನುಮ ||೧೦೧||

ನಂಬನೀ ನುಡಿಗೆನ್ನನೆನ್ನನು
ನಂಬುವಂತಿರೆ ಕಿಱಿದು ಕುಱುಹುಗ
ಳೆಂಬವುಳ್ಳಡೆ ಕೊಡಿ ನಿರೂಪವನನಿತಱಿಂ ಮೇಲೆ
ನಂಬದಿರನಿದು ತಥ್ಯವೆನೆ ಬಳಿ
ಕಂಬುಜಾನನೆ ತೆಗೆದಳಾ ಮಲಿ
ನಾಂಬರದ ನಿಱಿಮಱೆಯ ನಿರುಪಮವರಶಿಖಾಮಣಿಯ ||೧೦೩||

ಗುಣನಿಧಿಯೆ ಬಾ ಕಂದ ಕಪಿದಿನ
ಮಣಿಯೆ ಬಾಯೆಂದಮಲಚೂಡಾ
ಮಣಿಯನಿತ್ತಳು ತುಂಬುವಂಬಕಜಲದ ಝಾಡಿಯಲಿ
ರಣಭಯಂಕರ ರಾಘವಂಗೀ
ಮಣಿಯ ಕೊಡು ನೀನೆಂದ ದಿನಕರಿ
ಗಣದಿಶಾಪಟಮಲ್ಲನನು ತಹುದೆಂದಳಿಂದುಮುಖಿ ||೧೦೪||

ಮಗನೆ ಕೇಳ್ ರಾಕ್ಷಸರು ಮಾಯಾ
ವಿಗಳು ಮಾಂಸಾಹಾರಿಗಳು ಮೈ
ದೆಗೆದು ನಡೆ ಮತಿವಂತನಾಗಿಯೆಕಂದ ಹೋಗೆಂದು
ಅಗಲಲಾರದೆ ಪಾವಮಾನಿಯ
ಮಗುಳೆ ಮಗುಳುಪಚರಿಸಿ ತೊರವೆಯ
ನಗರದೊಡೆಯನ ಚರನ ಕಳುಹಿದಳಶ್ರುಜಲ ಝಡಿಯೆ ||೧೦೫||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries