ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ ಜನ್ಮದಿನೋತ್ಸವ ಕಾರ್ಯಕ್ರಮವು ವಿವಿಧ ಕಾರ್ಯಕ್ರಮಗಳೊಂದಿಗೆ ಶ್ರೀಮಠದಲ್ಲಿ ಗುರುವಾರ ಸಂಪನ್ನಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7 ರಿಂದ 9ರ ವರೆಗೆ ಶ್ರೀದೇವರಿಗೆ ವಿಶೇಷ ಅಭಿಷೇಕ, ಮಹಾಪೂಜೆ ನಡೆಯಿತು. ಬಳಿಕ 12 ರಿಂದ ವಿಶೇಷ ಹವನದ ಪೂರ್ಣಾಹುತಿ. ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ 7.30 ರಿಂದ ಮಹಾಪೂಜೆ, ಭಜನಾ ಸಂಕೀರ್ತನೆ, ಗುರುವಂದನೆಗಳು ನೆರವೇರಿದವು. ರಾತ್ರಿ 8.30 ರಿಂದ ವಿದುಶಿಃ ಸುಜಯ್ ಕೃಷ್ಣಮೂರ್ತಿ ಚೆನ್ನೈ ಹಾಡುಗಾರಿಕೆಯಲ್ಲಿ ಸಂಗೀತ ಕಚೇರಿ ನಡೆಯಿತು. ಪಕ್ಕವಾದ್ಯಗಳಲ್ಲಿ ವಿದ್ವಾನ್ ವೇಣುಗೋಪಾಲ ಶಾನುಭೋಗ್ ಮಂಗಳೂರು(ವಯಲಿನ್), ವಿದ್ವಾನ್ ಅನೂರು ದತ್ತಾತ್ರೇಯ ಶರ್ಮಾ(ಮೃದಂಗ), ವಿದ್ವಾನ್ ಜಗದೀಶ ಕುರ್ತಕೋಟಿ(ತಬ್ಲಾ)ದಲ್ಲಿ ಸಾಥ್ ನೀಡಿದರು.




