ಪೆರ್ಲ: ಇಂದಿನ ಹೊಸ ತಲೆಮಾರು ಫ್ಯಾಶನ್ ನ ಹೆಸರಲ್ಲಿ ವ್ಯಾಪಕ ಪ್ರಮಾಣದ ಸಂಸ್ಕøತಿಯ ಅಧಃಪತನಕ್ಕೆ ಕಾರಣವಾಗುವ ಜೀವನ ಕ್ರಮ, ರೀತಿ ರಿವಾಜುಗಳತ್ತ ಮುಖಮಾಡಿರುವುದು ಅಪಾಯಕಾರಿಯಾಗಿದೆ. ಧಾರ್ಮಿಕ ಆಚರಣೆಗಳ ಹೆಸರಲ್ಲಿ ಸಾಂಸ್ಕøತಿಕ ಅವನತಿ ಉಂಟಾಗುತ್ತಿರುವುದು ಭೀತಿಯನ್ನುಂಟುಮಾಡಿದ್ದು, ಶ್ರದ್ದಾವಂತ ಸಭ್ಯ ನಾಗರಿಕರು ಜಾಗೃತ ಕಾರ್ಯಕ್ರಮಗಳ ಮೂಲಕ ಮತ್ತೆ ಮೂಲ ಪರಂಪರೆಯನ್ನು ಬೆಂಬಲಿಸುವ ಚಟುವಟಿಕೆಗಳಿಗೆ ಬಲತುಂಬಬೇಕು ಎಂದು ಹಿರಿಯ ಸಾಮಾಜಿಕ, ಧಾರ್ಮಿಕ ಮುಖಂಡ ಟಿ.ಆರ್.ಕೆ.ಭಟ್ ಪೆರ್ಲ ಅವರು ತಿಳಿಸಿದರು.
ನೂತನವಾಗಿ ಅಸ್ವಿತ್ವಕ್ಕೆ ಬಂದಿರುವ ಸಾತ್ವಿಕ ಧಾರ್ಮಿಕ ಸಾಂಸ್ಕøತಿಕ ಸಾಹಿತ್ತಿಕ ಕಲಾಸಂಘ ಪೆರ್ಲ ಸಂಘಟನೆಯನ್ನು ಭಾನುವಾರ ಇಡಿಯಡ್ಕ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ಸಾಹಿತಿ ಗೋಪಾಲಕೃಷ್ಣ ಭಟ್ ಗೋಳಿತ್ತಡ್ಕ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ "ಆಚರಣೆಗಳಲ್ಲಿ ಭಜನಾ ಸಂಸ್ಕøತಿ" ವಿಷಯದ ಬಗ್ಗೆ ಖ್ಯಾತ ಸಂಕೀರ್ತನೆಕಾರ ರಾಮಕೃಷ್ಣ ಕಾಟುಕುಕ್ಕೆ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ,ರಾಜಸ, ತಾಮಸ ಹಾಗೂ ಸಾತ್ವಿಕ ಗುಣಗಳು ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಆದರೆ ರಾಜಸ ಮತ್ತು ತಾಮಸ ಪ್ರವೃತ್ತಿಗಳೇ ಇಂದು ಅಧಿಕಗೊಂಡಿದ್ದು, ಸಾತ್ವಿಕತೆಯ ಕೊರತೆಯಿಂದ ಗೊಂದಲಗಳು ಸೃಷ್ಟಿಯಾಗಿವೆ ಎಂದು ತಿಳಿಸಿದರು. ಜೀವನದ ಸಾಥ್ರ್ಯಕ್ಯವು ಶರಣಾಗತಿಯಲ್ಲಿ ನಿಕ್ಷಿಪ್ತವಾಗಿದ್ದು, ಅಂತಹ ಮನೋಸ್ಥಿತಿ ಕುಂಠಿತಗೊಂಡಿದೆ. ಹೊಸ ತಲೆಮಾರಲ್ಲಿ ಎಲ್ಲಾ ಅರಿವಿನ ವಿಸ್ತಾರತೆ ಇದೆ. ಆದರೆ ದೇವರ ಸಾಮೀಪ್ಯದ ಕೊರತೆ ಎದ್ದು ಕಾಣುತ್ತಿದೆ ಎಂದು ಕಳಕಳಿ ವ್ಯಕ್ತಪಡಿಸಿದ ಅವರು, ಸಾಂಪ್ರದಾಯಿಕ ಶೈಲಿಯ ಜೀವನ ಕ್ರಮ, ಆಚಾರ ಅನುಷ್ಠಾನಗಳನ್ನು ಅನುಸರಿಸುವುದರಿಂದ ನೆಮ್ಮದಿ ಪ್ರಾಪ್ತವಾಗುವುದೆಂದು ತಿಳಿಸಿದರು.
ಯಕ್ಷಗಾನದಲ್ಲಿ ಆಧುನಿಕ ಪ್ರಭಾವ ವಿಷಯದ ಬಗ್ಗೆ ಹಿರಿಯ ಯಕ್ಷಗಾನ ಕಲಾವಿದ ಅಪ್ಪಕುಂಞÂ್ಞ ಮಣಿಯಾಣಿ ಅವರು ಮಾತನಾಡಿ ಮನಸ್ಸನ್ನು ಅನುರಂಜಿಸುವ ಸಾಹಿತ್ಯಗಳ ಕೊರತೆ ಇಂದಿದೆ. ಸಾಂಪ್ರದಾಯಿಕತೆಯನ್ನು ಮರೆತು ವೈಯುಕ್ತಿಕ ವ್ಯಕ್ತಿತ್ವವನ್ನು ಪ್ರಚಾರಪಡಿಸುವ ಗೀಳಿಗೊಳಗಾಗಿ ಕಲಾವಿದರು ಸಹಿತ ಜನಸಾಮಾನ್ಯರು ಸಂಸ್ಕøತಿ, ಪರಂಪರೆಯನ್ನು ಮರೆಯುತ್ತಿದ್ದಾರೆ. ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಆಸಕ್ತರಾಗಬೇಕು ಎಂದು ತಿಳಿಸಿದರು.
ಧಾರ್ಮಿಕತೆ ಮತ್ತು ಸಾಹಿತ್ಯ ವಿಷಯದ ಬಗ್ಗೆ ಲೇಖಕಿ, ಕವಯಿತ್ರಿ ಅಕ್ಷತಾರಾಜ್ ಪೆರ್ಲ ಉಪನ್ಯಾಸ ನೀಡಿ, ಧರ್ಮಯುತವಾದ ಅಂತರಂಗದಿಂದ ಹುಟ್ಟುವ ಭಾವನೆಗಳು ಅಕ್ಷರ ರೂಪದಲ್ಲಿ ಜನರನ್ನು ಎಚ್ಚರಿಸಬೇಕು. ಸ್ವಪ್ರಶಂಸೆಯಿಂದ ದೂರ ಉಳಿದು ಬರೆಯುವ ಬರಹಗಾರ ಗೆಲ್ಲುತ್ತಾನೆ ಎಂದು ತಿಳಿಸಿದರು.
ತೇಜಸ್ ರೈ ಬಜಕ್ಕೂಡ್ಲು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. ಮಣಿರಾಜ್ ವಾಂತಿಚ್ಚಾಲ್ ಉಪಸ್ಥಿತರಿದ್ದು ಸಂಯೋಜಿಸಿದರು. ಬಳಿಕ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಹಿರಿಯ, ಯುವ ಹಾಗೂ ಉದಯೋನ್ಮುಖ ಕವಿ-ಕವಯತ್ರಿಗಳಿಂದ ಕವಿಗೋಷ್ಠಿ ನಡೆಯಿತು. ಹಿರಿಯ ಸಾಹಿತಿ ಡಾ.ಸುರೇಶ್ ನೆಗಳಗುಳಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯನ್ನು ಸಾಹಿತಿ ಡಾ.ಎಸ್.ಎನ್.ಭಟ್ ಪೆರ್ಲ ಉದ್ಘಾಟಿಸಿದರು.



