HEALTH TIPS

ಉಪ್ಪಳದ ಯುವತಿ ಅಕ್ಷರ ಜೋಡಿಸಿ ರಚಿಸಿದ ಮುಖ್ಯಮಂತ್ರಿಯವರ ಚಿತ:್ರ ಮುಖ್ಯಮಂತ್ರಿಗೆ ಹಸ್ತಾಂತರ

   

        ಉಪ್ಪಳ: ಉಪ್ಪಳದ ರಾಫಿಯಾ ಅಕ್ಷರಗಳನ್ನು ಜೋಡಿಸಿ ರಚಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಆರೋಗ್ಯ ಸಚಿವೆ ಶೈಲಜ ಟೀಚರ್, ಮುಖ್ಯಂತ್ರಿ ಜೊತೆಯಿರುವ  ಒಟ್ಟು ಎರಡು ಪೆÇಟೋಗಳನ್ನು ರಾಫಿಯಾ ಮುಖ್ಯಂತ್ರಿಯವರಿಗೆ ಹಸ್ತಾಂತರಿಸಿ ಅವರ ಅಭಿನಂದನೆಯನ್ನು ಪಡೆದುಕೊಂಡಿದ್ದಾರೆ. 

       ಇತ್ತೀಚೆಗೆ ಉಪ್ಪಳದಲ್ಲಿ ಎಡರಂಗದ ಅಭಿವೃದ್ದಿ ಮುನ್ನಡೆ ಜಾಥಾದ ಉದ್ಘಾಟನೆಗೆ ಆಗಮಿಸಿದ ವೇಳೆ ವೇದಿಕೆಯಲ್ಲಿ ಹಸ್ತಾಂತರಿಸಿದ್ದಾರೆ. ಪ್ರಧಾನ ಮಂತ್ರಿ ಸಹಿತ ವಿವಿಧ ಗಣ್ಯ ವ್ಯಕ್ತಿಗಳು, ಸಿನಿಮ ತಾರೆಯರ ಸಹಿತ ಸುಮಾರು 150ರಷ್ಟು ಚಿತ್ರಗಳನ್ನು ರಚಿಸಿ ಈಗಾಗಲೇ ರಾಫಿಯಾ ಪ್ರಸಂಶೆಗೆ ಪಾತ್ರರಾಗಿದ್ದಾರೆ. ಕಾಸರಗೋಡು ನಿವಾಸಿಯಾದ ಕೊಲ್ಲಿ ಉದ್ಯೋಗಿ ಇರ್ಷಾದ್ ರ ಪತ್ನಿಯಾಗಿರುವ ರಾಫಿಯಾ ಉಪ್ಪಳ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್-ಅಂಗನವಾಡಿ ಕಾರ್ಯಕರ್ತೆ ಜುಬೈದ ದಂಪತಿ ಪುತ್ರಿಯಾಗಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries