ಬದಿಯಡ್ಕ : ರಾಮಾಯಣ ಮಾಸಾಚರಣೆಯ ಪ್ರಯುಕ್ತ ಗೋಸಾಡ ಶ್ರೀ ಮಹಿಷಮರ್ಧಿನಿ ಕ್ಷೇತ್ರದಲ್ಲಿ ಶ್ರೀ ಮಹಿಷಮರ್ಧಿನಿ ಭಜನ ಸಂಘದ ವತಿಯಿಂದ ಇಂದು(ಆ.12 ಮಂಗಳವಾರ) ಸಂಜೆ 5.30 ರಿಂದ 7.30 ರ ತನಕ ರಾಮಾಯಣ ಕಥಾಪ್ರವಚನ ಕಾರ್ಯಕ್ರಮ ಜರಗಲಿದೆ. ನಿವೃತ್ತ ಮುಖ್ಯೋಪಾಧ್ಯಾಯ ಗಂಗಾಧರ ಮಾಸ್ತರ್ ಮವ್ವಾರು ಹಾಗೂ ನಿವೃತ್ತ ಡೆಪ್ಯುಟಿ ತಹಸೀಲ್ದಾರ್ ನಾರಾಯಣ ಗೋಸಾಡ ವಾಚನ- ಪ್ರವಚನ ನಡೆಸಿಕೊಡಲಿರುವರು. ರಾತ್ರಿ 8ಕ್ಕೆ ಶ್ರೀ ಕ್ಷೇತ್ರದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮತ್ತು ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾಸರಗೋಡು ತಹಸೀಲ್ದಾರ್ ರಮೇಶನ್ ಪೊಯಿನಾಚಿ ಅವರು ಭಾಗವಹಿಸಲಿರುವರು ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

