HEALTH TIPS

ನಕಲಿ ಪಡಿತರ ಚೀಟಿಗಳ ತನಿಖೆಗೆ ಜಾಗೃತ ದಳ

ತಿರುವನಂತಪುರಂ: ನಕಲಿ ಆದ್ಯತಾ ವರ್ಗದ ಪಡಿತರ ಚೀಟಿಗಳ ಪ್ರಕರಣದ ತನಿಖೆಗೆ ಜಾಗೃತ ದಳಕ್ಕೆ ಆದೇಶಿಸಲಾಗಿದೆ.

ಆಹಾರ ಇಲಾಖೆಯ ವೆಬ್‍ಸೈಟ್ ಅನ್ನು ಹ್ಯಾಕ್ ಮಾಡುವ ಮೂಲಕ ಸುಮಾರು ನೂರ ಐವತ್ತು ಆದ್ಯತಾ ವರ್ಗದ (ಗುಲಾಬಿ) ಕಾರ್ಡ್‍ಗಳನ್ನು ತಯಾರಿಸಲಾಗಿದೆ.

ತಿರುವನಂತಪುರಂ ದಕ್ಷಿಣ ನಗರ ಪಡಿತರ ಕಚೇರಿಯ ಗುಮಾಸ್ತ ಮತ್ತು ಪಡಿತರ ನಿರೀಕ್ಷಕರ ಲಾಗಿನ್ ಐಡಿ ಮತ್ತು ಪಾಸ್‍ವರ್ಡ್ ಅನ್ನು ಕದಿಯುವ ಮೂಲಕ ಈ ಕಾರ್ಡ್‍ಗಳನ್ನು ತಯಾರಿಸಲಾಗಿದೆ. ನಾಗರಿಕ ಸರಬರಾಜು ಪೆÇಲೀಸರಿಗೆ ಸಲ್ಲಿಸಿದ ದೂರಿನ ಆಧಾರದ ಮೇಲೆ, ವಂಚಿಯೂರು ಪೆÇಲೀಸರು ಬೀಮಾಪಲ್ಲಿಯ ಬಿಎಫ್‍ಎ ಜಂಕ್ಷನ್‍ನಲ್ಲಿ ಆನ್‍ಲೈನ್ ಸೇವಾ ಕೇಂದ್ರವನ್ನು ನಡೆಸುತ್ತಿರುವ ಹಸೀಬ್ ಖಾನ್ ಮತ್ತು ಬೀಮಾಪಲ್ಲಿಯಲ್ಲಿ ಪಡಿತರ ಅಂಗಡಿಯನ್ನು ನಡೆಸುತ್ತಿರುವ ಸಹದ್ ಖಾನ್ ಅವರನ್ನು ಬಂಧಿಸಿದ್ದಾರೆ.

ತರುವಾಯ, ನಾಗರಿಕ ಸರಬರಾಜು ಇಲಾಖೆಯು ವಿವರವಾದ ತನಿಖೆಗಾಗಿ ಮುಖ್ಯಮಂತ್ರಿಗೆ ಸಲ್ಲಿಸಿದ ವರದಿಯ ಆಧಾರದ ಮೇಲೆ ಜಾಗೃತ ದಳ ತನಿಖೆಗೆ ಆದೇಶಿಸಿದೆ. ಹಣ ಪಡೆದ ನಂತರ ಬೀಮಾಪಲ್ಲಿ ಪ್ರದೇಶದಲ್ಲಿ ನಕಲಿ ಪಡಿತರ ಚೀಟಿಗಳನ್ನು ತಯಾರಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries